ಸಿಲಿಕಾನ್ ಸಿಟಿ ಬೆಂಗಳೂರು ಕೊರೋನಾ ಅಬ್ಬರದಿಂದ ತತ್ತರಿಸಿ ಹೋಗಿದೆ. ಹೀಗಾಗಿ ನಗರದಾದ್ಯಂತ ಕಠಿಣ ನಿಯಮಾವಳಿಗಳನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಷರತ್ತುಬದ್ಧ ಅನ್ ಲಾಕ್ಗೆ ಸರ್ಕಾರ ಆಲೋಚನೆ ನಡೆಸಿದೆ.
ಬೆಂಗಳೂರು(ಜು.21): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ವಿಧಿಸಲಾಗಿದ್ದ ಒಂದುವಾರದ ಲಾಕ್ಡೌನ್ ಬುಧವಾರ(ಜು.22) ರಿಲೀಸ್ ಆಗಲಿದೆ. ಆದರೆ ಲಾಕ್ಡೌನ್ ಮುಗಿದರೂ, ಕಠಿಣ ರೂಲ್ಸ್ ಜಾರಿಯಾಗುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.
ಹೌದು, ಸಿಲಿಕಾನ್ ಸಿಟಿ ಬೆಂಗಳೂರು ಕೊರೋನಾ ಅಬ್ಬರದಿಂದ ತತ್ತರಿಸಿ ಹೋಗಿದೆ. ಹೀಗಾಗಿ ನಗರದಾದ್ಯಂತ ಕಠಿಣ ನಿಯಮಾವಳಿಗಳನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಷರತ್ತುಬದ್ಧ ಅನ್ ಲಾಕ್ಗೆ ಸರ್ಕಾರ ಆಲೋಚನೆ ನಡೆಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪುಗೂಡದಂತೆ ಪೊಲೀಸರು ಹದ್ದಿನಗಣ್ಣು ಇಡಲಿದ್ದಾರೆ, ಸಿಟಿ ಮಾರ್ಕೆಟ್ ಸೇರಿದಂತೆ ಹಲವು ಮಾರ್ಕೆಟ್ಗಳು ಬಂದ್ ಆಗಲಿವೆ. ಬೆಂಗಳೂರಲ್ಲಿ ಕಠಿಣ ರೂಲ್ಸ್ ಹೇಗೆಲ್ಲಾ ಇರಲಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.