'ಫೈರಿಂಗ್‌ನಲ್ಲಿ ಸತ್ತವರು ಅಮಾಯಕರು'ಎಂದ ಜಮೀರ್‌ ವಿರುದ್ಧ ಡಿಕೆಶಿಗೆ ದೂರು

Aug 15, 2020, 5:47 PM IST

ಬೆಂಗಳೂರು (ಆ. 15): ಬೆಂಗ್ಳೂರು ಗಲಭೆ ಸಂದರ್ಭದಲ್ಲಿ ಜಮೀರ್ ಅಹ್ಮದ್ ಹೇಳಿಕೆ ಬಗ್ಗೆ ಕಾಂಗ್ರೆಸ್‌ನಲ್ಲೇ ಅಸಮಾಧಾನ ಎದ್ದಿದೆ. ಫೈರಿಂಗ್‌ನಲ್ಲಿ ಸತ್ತವರು ಅಮಾಯಕರು ಎಂದಿದ್ದರು ಜಮೀರ್. ಇವರ ಈ ಹೇಳಿಕೆಗೆ ಕಾಂಗ್ರೆಸ್‌ ನಾಯಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಡಿಕೆಶಿ ಹೇಳಿಕೆಗೆ ಕಡಿವಾಣ ಹಾಕಿ ಎಂದು ಡಿಕೆ ಶಿವಕುಮಾರ್‌ಗೆ ದೂರು ಸಲ್ಲಿಸಿದ್ದಾರೆ. 

'ಜಮೀರ್ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಪಾದರಾಯನಪುರ ಗಲಭೆ ಸಮಯದಲ್ಲಿಯೂ ಇದೇ ರೀತಿ ಹೇಳಿಕೆ ನೀಡಿದ್ದರು. ಆಗಲೂ ಪಕ್ಷಕ್ಕೆ ಡ್ಯಾಮೇಜ್ ಆಗಿತ್ತು. ಪದೇ ಪದೇ ಇದು ರಿಪೀಟ್ ಆಗುತ್ತಿದೆ. ತನಿಖೆ ಮುಗಿಯುವವರೆಗೆ ಜಮೀರ್‌ರನ್ನು ಕಂಟ್ರೋಲ್ ಮಾಡಿ' ಎಂದು ಡಿಕೆಶಿಗೆ ದೂರು ನೀಡಿದ್ದಾರೆ. 

ಬೆಂಗ್ಳೂರು ಗಲಭೆ: ಬಂಧನ ಭೀತಿಯಲ್ಲಿರುವ ಕಾರ್ಪೋರೇಟರ್ ಜಾಕೀರ್ ಎಸ್ಕೇಪ್!