Cabinet Reshuffle: ಸಿಎಂ ಬೊಮ್ಮಾಯಿ ದೆಹಲಿ ಭೇಟಿ ನಾಳೆಯಲ್ಲ, ಫೆ. 07 ಕ್ಕೆ

Feb 2, 2022, 4:25 PM IST

ಬೆಂಗಳೂರು (ಫೆ. 02): ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆ (Cabinet Reshuffle) ಬಗ್ಗೆ ಚರ್ಚೆಯಾಗುತ್ತಿದೆ.ದೆಹಲಿಗೆ ತೆರಳಿ, ವರಿಷ್ಠರ ಜೊತೆ ಚರ್ಚಿಸುತ್ತೇನೆಂದು ಸಿಎಂ ಬೊಮ್ಮಾಯಿ ಹೇಳಿದ್ಧಾರೆ. ನಾಳೆ ದೆಹಲಿಗೆ ಹೋಗುವುದಾಗಿ ಸಿಎಂ ಹೇಳಿದ್ದರು. ಆದರೆ ಅದು ಬದಲಾಗಿದೆ. ನಾಳೆಯ ಬದಲು ಸೋಮವಾರ (ಫೆ. 07) ಕ್ಕೆ ದೆಹಲಿಗೆ ಹೋಗಲಿದ್ದಾರೆ. 

ರಾಜ್ಯ ಸಂಸದರ ಜೊತೆ ಸಭೆ ನಡೆಸಬೇಕಿದೆ. ಅವರ ಮನವಿ ಮೇರೆಗೆ ದೆಹಲಿ ಭೇಟಿಯನ್ನು ಮುಂದೂಡಿದ್ದೇನೆ. ಸೋಮವಾರ ದೆಹಲಿಗೆ ಹೋಗಲಿದ್ದೇನೆ' ಎಂದು ಸಿಎಂ ಬೊಮ್ಮಾಯಿ ಹೇಳಿದ್ಧಾರೆ.