'ಎಸ್‌ಐಟಿ ಮುಂದಲ್ಲ, ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುತ್ತಾಳೆ ಸೀಡಿ ಲೇಡಿ..'

Mar 28, 2021, 4:35 PM IST

ಬೆಂಗಳೂರು (ಮಾ. 28): ಎಸ್‌ಐಟಿ ಮುಂದಲ್ಲ, ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಸೀಡಿ ಲೇಡಿ ಹಾಜರಾಗುತ್ತಾಳೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ. 

ಪೊಲೀಸರು ತನಿಖೆಯ ದಿಕ್ಕು ತಪ್ಪಿಸುತ್ತಿದ್ಧಾರೆ. ನಮಗೆ ಎಸ್‌ಐಟಿ ಬಗ್ಗೆ ನಂಬಿಕೆ ಇಲ್ಲ. ಹಾಗಾಗಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುತ್ತೇವೆ ಎಂದು ಹೇಳಿದ್ಧಾರೆ.  ಇನ್ನೊಂದು ಕಡೆ FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಲು ರಮೇಶ್ ಜಾರಕಿಹೊಳಿ ಸಿದ್ಧತೆ ನಡೆಸಿದ್ದಾರೆ. ಒಟ್ಟಿನಲ್ಲಿ ಇಡೀ ಪ್ರಕರಣ ಕುತೂಹಲ ಮೂಡಿಸಿದೆ. 

ಸೀಡಿ ಲೇಡಿ ದೂರಿಗೆ ಸಾಹುಕಾರ್ ತಂತ್ರ, ಹೈಕೋರ್ಟ್ ಮೆಟ್ಟಿಲೇರಲು ಪ್ಲ್ಯಾನ್..!