ರಾಜಕಾರಣಿಗಳನ್ನು ಹನಿಟ್ರ್ಯಾಪ್‌ಗೆ ಬೀಳಿಸಲು ಸೀಡಿ ಗ್ಯಾಂಗ್ ಖತರ್ನಾಕ್ ಸ್ಕೆಚ್..!

Apr 9, 2021, 10:21 AM IST

ಬೆಂಗಳೂರು (ಏ. 09): ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಜಾರಕಿಹೊಳಿ ಇಮೇಜ್‌ಗೆ ದೊಡ್ಡ ಡ್ಯಾಮೇಜನ್ನೇ ಮಾಡಿದೆ. ತಮ್ಮ ಸಚಿವ ಸ್ಥಾನಕ್ಕೂ ರಾಜಿನಾಮೆ ಕೊಟ್ಟಾಗಿದೆ. ರಾಜಕೀಯವಾಗಿ ಮುಜುಗರ ಅನುಭವಿಸಿಯೂ ಆಗಿದೆ. ಎಸ್‌ಐಟಿ ವಿಚಾರಣೆಯೂ ಮುಂದುವರೆದಿದೆ. ಎಸ್‌ಐಟಿ ವಿಚಾರಣೆ ಸ್ಫೋಟಕ ವಿಚಾರಗಳು ಹೊರ ಬರುತ್ತಿದೆ.

ಕುಮಾರಸ್ವಾಮಿಗೆ 'ಕರಿಯ' ಎಂದ ಜಿಗರ್‌ಥಂಡಾ, ಡೊಂಕು ಬಾಲ, ಹರಕು ಬಾಯಿ ಜಮೀರ್.!

ಶಂಕಿತ ಕಿಂಗ್‌ಪಿನ್‌ಗಳು ಬರೀ ಜಾರಕಿಹೊಳಿಗೆ ಮಾತ್ರವಲ್ಲ, ಬೇರೆ ರಾಜಕಾರಣಿಗಳನ್ನೂ ಸಿಲುಕಿಸುವ ಹುನ್ನಾರ ನಡೆದಿತ್ತು. ಅವರ ಸೀಡಿಗಳನ್ನೂ ಮಾಡಲು ಈ ಗ್ಯಾಂಗ್ ಸ್ಕೆಚ್ ಹಾಕಿತ್ತು ಎಂಬ ವಿಚಾರ ಬಯಲಿಗೆ ಬಂದಿದೆ. ಅಷ್ಟಕ್ಕೂ ಈ ಗ್ಯಾಂಗ್‌ನ ಖತರ್ನಾಕ್ ಐಡಿಯಾ ಹೇಗಿತ್ತು..? ನೀವೇ ನೋಡಿ.