ಕರ್ತವ್ಯಕ್ಕೆ ಹಾಜರಾಗಿ ಇಲ್ಲಾ ಕ್ವಾಟ್ರಸ್ ಖಾಲಿ ಮಾಡಿ; ಅಧಿಕಾರಿಗಳಿಂದ ಒತ್ತಡ ತಂತ್ರ..!

Apr 9, 2021, 1:51 PM IST

ಬೆಂಗಳೂರು (ಏ. 09): ಸಾರಿಗೆ ನೌಕರರ ಮುಷ್ಕರ 3 ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ನೌಕರರ ಮೇಲೆ ಒತ್ತಡ ತಂತ್ರ ಪ್ರಯೋಗಿಸುತ್ತಿದೆ. 'ಕರ್ತವ್ಯಕ್ಕೆ ಹಾಜರಾಗಿ, ಇಲ್ಲ ಕ್ವಾಟ್ರಸ್ ಖಾಲಿ ಮಾಡಿ' ಎಂದು ಅಧಿಕಾರಿಗಳು ಸಾರಿಗೆ ನೌಕರರಿಗೆ ನೊಟೀಸ್ ನೀಡುತ್ತಿದ್ದಾರೆ. ಇದರಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.  'ಮನೆ ಖಾಲಿ ಮಾಡಿ, ಮಕ್ಕಳನ್ನು ಕರೆದುಕೊಂಡು ನಾವೆಲ್ಲಿಗೆ ಹೋಗೋಣ..? ನೊಟೀಸ್ ಕೊಡಲಿ, ಎಸ್ಮಾವನ್ನೂ ಹಾಕಲಿ, ನಾವು ಕೆಲಸಕ್ಕೆ ಕಳುಹಿಸುವುದಿಲ್ಲ' ಎಂದು ಹೇಳಿದ್ದಾರೆ. 
ಬೇಡಿಕೆ ಈಡೇರಿಸುವುದೇ ಅನುಮಾನ, ಒತ್ತಡ ತಂತ್ರಕ್ಕೆ ಮೊರೆ ಹೋದ ಸರ್ಕಾರ.!