ಮೆಜೆಸ್ಟಿಕ್‌ನಲ್ಲಿ ವಲಸೆ ಕಾರ್ಮಿಕರ ಪರದಾಟ, ಎಲ್ಲವೂ ಅವ್ಯವಸ್ಥೆ

May 3, 2020, 11:37 AM IST

ಬೆಂಗಳೂರು (ಮೇ. 03): ಎರಡನೇ ಹಂತದ ಲಾಕ್‌ಡೌನ್ ಇಂದು ಮುಕ್ತಾಯಗೊಳ್ಳಲಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ಅವರವರ ಊರುಗಳಿಗೆ ಹೋಗುವ ಅವಕಾಶ ಕಲ್ಪಿಸಲಾಗಿದೆ ನಿಜ. ಆದರೆ ಯಾವುದೂ ಸುಸೂತ್ರವಾಗಿಲ್ಲ. ಬೆಂಗಳೂರಿನ ಮೂಲೆ ಮೂಲೆಯಿಂದ ಕಾರ್ಮಿಕರು ಮೆಜೆಸ್ಟಿಕ್‌ಗೆ ನಡೆದುಕೊಂಡು ಬರುತ್ತಿದ್ದಾರೆ.  ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆಯನ್ನೂ ಮಾಡಿಲ್ಲ. ಕೆಲವರು ರಾತ್ರಿಯೇ ಇಲ್ಲಿಯೇ ಬಂದು ಪರದಾಡುತ್ತಿದ್ದಾರೆ. ಎಲ್ಲಿ ನೋಡಿದ್ರೂ ಅವ್ಯವಸ್ಥೆ ಕಾಣಿಸುತ್ತಿದೆ. ಚಿಕ್ಕ ಬಾಣಾವರದಲ್ಲಿ ಬಿಹಾರ, ಒಡಿಶಾ ಕಾರ್ಮಿಕರನ್ನು ಸೂಸೂತ್ರವಾಗಿ ಕಳುಹಿಸಿ ಕೊಡಲಾಗುತ್ತಿದೆ. ಚಿಕ್ಕಬಾಣಾವರದಲ್ಲಿ ಮಾಡಲಾದ ವ್ಯವಸ್ಥೆಯನ್ನು ಮೆಜೆಸ್ಟಿಕ್‌ನಲ್ಲಿ ಯಾಕೆ ಮಾಡಲಾಗುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. 

ಸರ್ಕಾರದಿಂದ ಕಾರ್ಮಿಕರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ!