ತೆರೆ ಮರೆಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ, ಸಮಾಜದ ಒಳಿತಾಗಿ ದುಡಿಯುತ್ತಿರುವ ಮಂದಿ ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಕೆಲವೊಮ್ಮೆ ಅವರನ್ನು ಗುರುತಿಸಲಾಗುತ್ತದೆ, ಕೆಲವೊಮ್ಮೆ ಅವರು ಬೆಳಕಿಗೆ ಬರದೇ ಇರಬಹುದು. ಅಂತವನ್ನು ಗುರುತಿಸುವ ಕೆಲಸ ಮಾಡುತ್ತಿದೆ ಬಿಗ್ 3.
ಬೆಂಗಳೂರು (ಜು. 09): ತೆರೆ ಮರೆಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ, ಸಮಾಜದ ಒಳಿತಾಗಿ ದುಡಿಯುತ್ತಿರುವ ಮಂದಿ ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಕೆಲವೊಮ್ಮೆ ಅವರನ್ನು ಗುರುತಿಸಲಾಗುತ್ತದೆ, ಕೆಲವೊಮ್ಮೆ ಅವರು ಬೆಳಕಿಗೆ ಬರದೇ ಇರಬಹುದು. ಅಂತವನ್ನು ಗುರುತಿಸುವ ಕೆಲಸ ಮಾಡುತ್ತಿದೆ ಬಿಗ್ 3.
ಇಂದಿನ ನಮ್ಮ ಹೀರೋ ಗೋರಗುಂಟೆ ಪಾಳ್ಯದ ಪಿಎಸ್ಐ ಶಾಂತಪ್ಪ. ಇವರ ಸಾಧನೆ ಏನು ಕಡಿಮೆ ಇಲ್ಲ. ಗೋರಗುಂಟೆ ಪಾಳ್ಯ ಪ್ರಯಾಣಿಕರು ಹೆಚ್ಚಿರುವ ಸ್ಥಳ. ಇಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಿದ್ದರಿಂದ ಜನರು ಪರಡಾಡುತ್ತಿದ್ದರು. ಇದನ್ನ ಗಮನಿಸಿದ ಪಿಎಸ್ಐ ಶಾಂತಪ್ಪ, ಶೌಚಾಲಯ ನಿರ್ಮಾಣ ಮಾಡಬೇಕೆಂದು ಪಣ ತೊಡುತ್ತಾರೆ. ಟ್ವಿಟರ್ನಲ್ಲಿ 100 ದಿನಗಳ ಕಾಲ ಅಭಿಯಾನ ನಡೆಸುತ್ತಾರೆ. ಬಿಬಿಎಂಪಿ ಕ್ಯಾರೇ ಎನ್ನಲಿಲ್ಲ. ಒಟ್ಟು 10 ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಇವರ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.