Big 3 Hero: ಮೂರ್ತಿ ಚಿಕ್ಕದಾದರೂ ಈತನ ಕೆಲಸ ದೊಡ್ಡದು: ಮನ ಮಿಡಿಯುತ್ತೆ ತಂದೆ-ಮಗನ ಪ್ರೀತಿ

Big 3 Hero: ಮೂರ್ತಿ ಚಿಕ್ಕದಾದರೂ ಈತನ ಕೆಲಸ ದೊಡ್ಡದು: ಮನ ಮಿಡಿಯುತ್ತೆ ತಂದೆ-ಮಗನ ಪ್ರೀತಿ

Published : Jun 25, 2022, 02:12 PM IST

ಪ್ರತಿವಾರ ನಾವು  ಮೂವರು  ಹೀರೋಗಳ ಸಾಧನೆ ಬಗ್ಗೆ ನಿಮಗೆ ತೋರಿಸ್ತಾ ಇದ್ದೀವಿ. ಆದ್ರೆ,ನಾವ್ ಇವತ್ತು ಓನ್ ಆಂಡ್ ಓನ್ಲಿ  ಸಿಂಗಲ್  ಹೀರೋನ ನಿಮಗೆ ತೋರಿಸ್ತಿವಿ. ಯಾವ ಸಿನಿಮಾ ಹೀರೋಗಳಿಗೂ ಈತ ಕಮ್ಮಿ ಇಲ್ಲ. ಈ  ಕಾಲದಲ್ಲಿ  ಮಕ್ಕಳು ಮೊಬೈಲ್ನಲ್ಲಿ ಸದಾ ಬ್ಯುಸಿ ಆಗಿರುತ್ತಾರೆ. ಮೊಬೈಲ್ ಕೈಗೆ ಸಿಕ್ಕ ಮೇಲಂತೂ ಒಬ್ಬೊಬ್ಬರು ಒಂದೊಂದು ದಿಕ್ಕು.ಮಾತು ಕತೆ, ಬಾಂಧ್ಯವ್ಯವೇ ಕಡಿಮೆ ಆಗುತ್ತಾ ಹೋಗ್ತಿದೆ. 

ಪ್ರತಿವಾರ ನಾವು  ಮೂವರು  ಹೀರೋಗಳ ಸಾಧನೆ ಬಗ್ಗೆ ನಿಮಗೆ ತೋರಿಸ್ತಾ ಇದ್ದೀವಿ. ಆದ್ರೆ,ನಾವ್ ಇವತ್ತು ಓನ್ ಆಂಡ್ ಓನ್ಲಿ  ಸಿಂಗಲ್  ಹೀರೋನ ನಿಮಗೆ ತೋರಿಸ್ತಿವಿ. ಯಾವ ಸಿನಿಮಾ ಹೀರೋಗಳಿಗೂ ಈತ ಕಮ್ಮಿ ಇಲ್ಲ. ಈ  ಕಾಲದಲ್ಲಿ  ಮಕ್ಕಳು ಮೊಬೈಲ್ನಲ್ಲಿ ಸದಾ ಬ್ಯುಸಿ ಆಗಿರುತ್ತಾರೆ. ಮೊಬೈಲ್ ಕೈಗೆ ಸಿಕ್ಕ ಮೇಲಂತೂ ಒಬ್ಬೊಬ್ಬರು ಒಂದೊಂದು ದಿಕ್ಕು.ಮಾತು ಕತೆ, ಬಾಂಧ್ಯವ್ಯವೇ ಕಡಿಮೆ ಆಗುತ್ತಾ ಹೋಗ್ತಿದೆ. 

ಕೋಲಾರ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಹೀಗೆ ಕಾಲು ಮುರಿದುಕೊಂಡು ವೀಲ್ ಚೇರ್ ಮೂಲಕ ಜೀವನ ಸಾಗಿಸುತ್ತಿರುವ ಈತನ ಹೆಸರು ತಬ್ರೋಜ್. ಕೋಲಾರ ಜಿಲ್ಲೆಯ ಶ್ರೀನಿವಾಸ ಪುರ ಮೂಲದ ನಿವಾಸಿ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ತಬ್ರೋಜ್‌ನ ಜೀವನ ಕಳೆದ ಎರಡು ವರ್ಷಗಳ ಹಿಂದೆ ಚೆನ್ನಾಗಿ ಯೇ ಇತ್ತು. ಆದ್ರೆ ಮದನಪಲ್ಲಿ ರಸ್ತೆಯಲ್ಲಿ ಆಟೋ ಓಡಿಸಿಕೊಂಡು ಹೋಗುವಾಗ ಟಾಟಾ ಸುಮೋ ಗೆ ಡಿಕ್ಕಿ ಹೊಡೆದ ಪರಿಣಾಮ ತಬ್ರೋ ಜ್ ನ ಬಲಗಾಲು ಮುರಿದುಹೋಗಿತ್ತು, ಕೂಡಲೇ ಜಿಲ್ಲಾಸ್ಪತ್ರೆಗೆ ಸ್ಥಳೀಯರು ದಾಖಲಿಸಿ ಚಿಕಿತ್ಸೆ ನೀಡಿದ್ರು ಸಹ ಇಂದಿಗೂ ಈತನ ಕಾಲು ಸರಿಯಾಗಿಲ್ಲ.

ಪ್ರತಿ ಕೆಲಸಕ್ಕೂ ವೀಲ್ ಚೇರ್ ಮೇಲೆ ಅವಲಂಬನೆ ಆಗಿರುವ ತಬ್ರೋಜ್ ಪಡಬಾರದ ಪಾಡು ಪಡ್ತಿದ್ದಾರೆ. ತಂದೆಗೆ ಈ ಪುಟ್ಟ  ಮಗನೇ ಆಧಾರವಾಗಿದ್ದಾನೆ. ಗಂಡನಿಗೆ ಅಪಘಾತ ಆಗಿ, ಆಸ್ಪತ್ರೆ ಸೇರ್ತಿದ್ದಂತೆ  ಇದೇ ವೇಳೆ ತಬ್ರೋಜ್ನ ಪತ್ನಿ ಸಹ ಇದ್ದಕ್ಕಿದಂತೆ ಕಾಣೆ ಆಗಿದ್ದಾಳೆ. ಘಟನೆ ನಡೆದ ವೇಳೆ ತಬ್ರೋಜ್‌ನ ಮಗ ಸುಲ್ತಾನ್‌ಗೆ  4 ವ ರ್ಷ,ಇತ್ತ ತಾಯಿಯ ಪ್ರೀತಿ ಸಿಗದೆ, ಆಧಾರವಾಗಿದ್ದ ತಂದೆಯ ಪರಿಸ್ಥಿತಿಯನ್ನು ಕಂ ಡು ಸುಲ್ತಾನ್ ತಂದೆಯ ಸೇವೆಯಲ್ಲಿಯೇ ತೊಡಗಿಕೊಂಡಿದ್ದಾನೆ. ಹೇಗಾದ್ರು  ಮಾಡಿ ತಂದೆಯ ಕಾಲು ಸರಿ ಮಾಡಿಸಲೇಬೇಕು ಎಂದು ಪ್ರತಿ ಕ್ಷಣ ತಬ್ರೋಜ್ನ ಸೇವೆಯಲ್ಲಿ ಮುಳುಗಿದ್ದಾನೆ.ಇಬ್ಬರಿಗೂ ಅವರೇ ಪ್ರಪಂಚವಾಗಿದ್ದು, ತಂದೆ ಮಗನ ಪ್ರೀತಿ ಕಂಡು ಇಡೀ ಆಸ್ಪತ್ರೆಯೇ ಮಮ್ಮಲ ಮರುಗುತ್ತಿದೆ.
 

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
Read more