Bengaluru: ವಿಕಲಾಂಗ ಮಹಿಳೆಯನ್ನು ಥಳಿಸಿದ ಎಎಸ್‌ಐ ನಾರಾಯಣ ಗೌಡ ಅಮಾನತು

Jan 30, 2022, 2:43 PM IST

ಬೆಂಗಳೂರು (ಜ. 30): ಅಂಗವಿಕಲ ಮಹಿಳೆಗೆ ಎಎಸ್‌ಐ ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಂಗವಿಕಲೆ ಮಂಜುಲಾ ನೋ ಪಾರ್ಕಿಂಗ್‌ನಲ್ಲಿ (No Parking) ತಮ್ಮ ವಾಹನವನ್ನು ನಿಲ್ಲಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ್ದ ಟೋಯಿಂಗ ಸಿಬ್ಬಂದಿ (Towing Staff) ಜತೆ ಮಂಜುಳಾ ವಾಗ್ವಾದ ನಡೆಸಿದ್ದಾರೆ ಅಲ್ಲದೇ ಎಎಸ್‌ಐ ನಾರಾಯಣ್‌ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.

Bengaluru: ಪಾರ್ಕಿಂಗ್ ವಿಚಾರಕ್ಕೆ ನಡು ರಸ್ತೆಯಲ್ಲೇ ಎಎಸ್‌ಐ, ಅಂಗವಿಕಲೆ ಮಾರಾಮಾರಿ!

ಇದರಿಂದ ಗಾಯಗೊಂಡ ಎಎಸ್‌ಐ ಕೋಪಗೊಂಡು ಮಹಿಳೆಗೆ ಶೂ ಕಾಲಿನಿಂದ ತುಳಿದಿದ್ದಾರೆ. ಸಾರ್ವಜನಿಕರು, ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ತಡೆದಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಅಂಗವಿಕಲ ಮಹಿಳೆಯನ್ನು ಎಎಸ್‌ಐ ಮನಬಂದಂತೆ ಥಳಿಸಿದ್ದಾರೆವಿಕಲಾಂಗ ಮಹಿಳೆಯನ್ನು ಮನಬಂದಂತೆ ಥಳಿಸಿದ್ದಕ್ಕೆ ಎಎಸ್‌ಐ ನಾರಾಯಣ ಗೌಡ ಅಮಾನತಾಗಿದ್ದಾರೆ.