ಬೆಂಗಳೂರು ಗಲಭೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಸಮೀವುದ್ದೀನ್ ಫೋನ್‌ನಲ್ಲಿ ಸ್ಫೋಟಕ ಮಾಹಿತಿ!

Aug 27, 2020, 2:39 PM IST

ಬೆಂಗಳೂರು(ಆ.27): ಡಿಜೆ ಹಳ್ಳಿ ಹಾಗೂ ಕಡಜಿ ಹಳ್ಳಿ ಗಲಭೆ ಪ್ರಕರಣ ಪ್ರಮುಖ ತಿರುವು ಪಡೆದುಕೊಂಡಿದೆ. ಉಗ್ರರ ಸಂಪರ್ಕದಲ್ಲಿದ್ದ ಸಮೀವುದ್ದೀನ್ ಶಾಕಿಂಗ್ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. 

ಸಮೀವುದ್ದೀನ್ ಬಳಿ ಇನ್ಸ್‌ಪೆಕ್ಟರ್, ಎಸಿಪಿ, ಡಿಸಿಪಿ ಮಟ್ಟದ ಅನೇಕ ಪೊಲೀಸ್ ಅಧಿಕಾರಿಗಳ ಫೋನ್ ನಂಬರ್ ಇತ್ತು. ಆತನ ಮೊಬೈಲ್ ಪರಿಶೀಲನೆ ನಡೆಸಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. 

ಇದನ್ನೂ ನೋಡಿ | ಸಿಸಿಬಿ ಮುಂದೆ ಪಿಎ ಬಾಯ್ಬಿಟ್ಟ ಸ್ಫೋಟಕ ಮಾಹಿತಿ; ಸಂಪತ್‌ ರಾಜ್‌ ವಿರುದ್ಧ ಸಿಕ್ತು ಸಾಕ್ಷಿ!...

ಇಷ್ಟೇ ಅಲ್ಲದೇ ಸಮೀವುದ್ದೀನ್ ಪೊಲೀಸರ ಕಚೇರಿಗೂ ಹಲವು ಬಾರಿ ಭೇಟಿ ನೀಡಿದ್ದ ವಿಚಾರ ಬೆಳಕಿಗೆ ಬಂದಿದೆ. ಈತ NGO ನೆಪದಲ್ಲಿ ಹಲವು ಬಾರಿ ಬೆಂಗಳೂರು ಆಯುಕ್ತರ ಭೇಟಿ ಮಾಡಿದ್ದ ಎಂಬ ವಿಚಾರವೂ ಬಹಿರಂಗಗೊಂಡಿದೆ. ಈ ಕುರಿತಾದ ಹೆಚ್ಚಿ ಮಾಹಿತಿ ಇಲ್ಲಿದೆ ನೋಡಿ