ಬೆಂಗ್ಳೂರು ಗಲಭೆ: ರಾತ್ರಿ 1 ಗಂಟೆಗೆ ಕೊತ್ತಂಬರಿ ಸೊಪ್ಪು ತರಲು ಹೋಗಿದ್ನಂತೆ ಪುಂಡ!

Aug 17, 2020, 6:32 PM IST

ಬೆಂಗಳೂರು (ಆ. 17): ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಪಟ್ಟಂತೆ ತಮ್ಮವರನ್ನು ಬಿಡುಗಡೆ ಮಾಡುವಂತೆ ಬಂಧಿತರಾಗಿರುವ ತಮ್ಮವರನ್ನು ಬಿಡುಗಡೆ ಮಾಡುವಂತೆ ಪೋಷಕರು ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ನಡೆಸಿದ್ದಾರೆ. 
ಕೆಲವರು ನೀಡಿದ ಅಸಂಬದ್ಧ ಹೇಳಿಕೆಗಳು ವೈರಲ್ ಆಗಿವೆ. 'ನನ್ನ ಅಣ್ಣ ರಾತ್ರಿ 1 ಗಂಟೆಗೆ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದರು' ಎಂದು ಓರ್ವ ಮಹಿಳೆ ಹೇಳಿದ್ದು ಇದು ಟ್ರೋಲ್‌ಗೆ ಒಳಗಾಗಿದೆ. ಇನ್ನೋರ್ವ ಮಹಿಳೆ, 'ನನಗೆ 3 ತಿಂಗಳು ಹಾಗೂ 7 ತಿಂಗಳಿನ ಹೆಣ್ಣು ಮಗುವಿದೆ. ದಯವಿಟ್ಟು ನನ್ನ ಪತಿಯನ್ನು ಬಿಟ್ಟು ಬಿಡಿ' ಎಂದಿದ್ದು ಇದೂ ಕೂಡಾ ಇನ್ನೊಂದು ಕಾಮಿಡಿ. 

ಒಬ್ಬೊಬ್ಬರದ್ದು ಒಂದು ಕಥೆ. ಈ ಪುಂಡರಿಗೆ ಮೊದಲೇ ಬುದ್ಧಿ ಹೇಳಿದ್ದರೆ ಇಂತದ್ದು ನಡೆಯುತ್ತಿತ್ತಾ? ಇವರ ಕಣ್ಣೀರಿನ ಕತೆಯನ್ನು ಅವರ ಬಾಯಲ್ಲೇ ಕೇಳಿ..!

ಗಲಭೆಕೋರರ ವಿರುದ್ಧ ರಾಜ್ಯ ಸರ್ಕಾರ ದಿಟ್ಟ ತೀರ್ಮಾನ, ಆಸ್ತಿ ಮುಟ್ಟುಗೋಲು!