ಬೆಂಗ್ಳೂರು ಗಲಭೆ: ಅಖಂಡಗೆ 3 ಕೋಟಿ ಮೌಲ್ಯದ ಆಸ್ತಿ ನಷ್ಟ..!

Aug 15, 2020, 4:59 PM IST

ಬೆಂಗಳೂರು (ಆ. 15): ಒಂದು ಫೇಸ್‌ಬುಕ್‌ ಪೋಸ್ಟ್‌ ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿತು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಗಲಭೆಕೋರರು ಏಕಾಏಕಿ ದಾಳಿ ನಡೆಸಿದ್ದಾರೆ. ಕಾರು, ಬೈಕ್‌ಗಳನ್ನು ಪುಡಿಪುಡಿ ಮಾಡಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನು ಎಸೆದಿದ್ದಾರೆ. ಮಗಳ ಮದುವೆಗೆಂದು ಶಾಸಕರು ತಯಾರಿ ನಡೆಸಿದ್ದರು. ಮದುವೆಗಾಗಿ ಒಡವೆಗಳನ್ನು ಮಾಡಿಸಿಟ್ಟಿದ್ದರಂತೆ. ಅದನ್ನು ಗಲಭೆಕೋರರು ದೋಚಿಕೊಂಡು ಹೋಗಿದ್ದಾರೆ. ಸುಮಾರು ಅರ್ಧ ಕೆಜಿಯಷ್ಟು ಬಂಗಾರವನ್ನು ಕಳೆದುಕೊಂಡಿದ್ದಾರೆ. ಮನೆ ಧ್ವಂಸದಿಂದ 50 ಲಕ್ಷ ರೂ ನಷ್ಟವಾಗಿದೆಯಂತೆ. ಸುಮಾರು 3 ಕೋಟಿ ರೂ ನಷ್ಟು ನಷ್ಟವಾಗಿದೆಯಂತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು ಗಲಭೆ ಹಿಂದೆ SDPI, ಸಂಘಟನೆ ನಿಷೇಧಕ್ಕೆ ಮೀನಮೇಷ ಯಾಕೆ?