ಭೂಮಿ ವಿಚಾರಕ್ಕೆ ಸರ್ಕಾರ ವಿರುದ್ಧವೇ ಕಾನೂನು ಸಮರಕ್ಕೆ ಜಿಂದಾಲ್ ತಯಾರಿ

Jun 4, 2021, 8:20 PM IST

 ಬಳ್ಳಾರಿ/ಬೆಂಗಳೂರು, (ಜೂನ್.04) ಬಳ್ಳಾರಿಯ ಜಿಂದಾಲ್‌ಗೆ ಸರ್ಕಾರಿ ‌ಭೂಮಿ ನೀಡೋ ವಿಚಾರ ರಾಜ್ಯ ಸರ್ಕಾರದಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಕೆಲವರು ಭೂಮಿ ಸೇಲ್ ಮಾಡಲು ಒಪ್ಪಿದ್ರೆ, ಇನ್ನೂ ಕೆಲವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ಭೂಮಿ ಹಿಂಪಡೆದ ರಾಜ್ಯ ಸರ್ಕಾರ, ಕೇಂದ್ರಕ್ಕೆ ಧನ್ಯವಾದ ಹೇಳಿದ ಯತ್ನಾಳ್!

ಇನ್ನು ಈ ವಿಚಾರ ರಾಜ್ಯ ಬಿಜೆಪಿಯಲ್ಲಿಯೇ ಬಿರುಗಾಳಿ ಎಬ್ಬಿಸಿದ್ದು, ಬಿಜೆಪಿ ಸರ್ಕಾರದಲ್ಲಿ ಬಿರುಕು ತಂದಿಟ್ಟಿತ್ತು. ಅಂತಿಮವಾಗಿ ಸರ್ಕಾರ ಭೂಮಿ ಸೇಲ್ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. ಆದ್ರೆ, ಇದೀಗ ಜಿಂದಾಲ್‌ ಕಂಪನಿ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ.