ಒಂದೆಡೆ ವ್ಯಾಪಾರ ಧರ್ಮಯುದ್ಧ ನಡೆಯುತ್ತಿದ್ದರೆ, ಇನ್ನೊಂದೆಡೆ ಸೌಹರ್ದತೆಯ ಮಾತು ಕೇಳಿ ಬರುತ್ತಿದೆ. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (Bappanadu Durga Parameshwari) ಆಡಳಿತ ಮಂಡಳಿ, ಕೊನೆಯ ದಿನದ ಜಾತ್ರೆಗೆ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಿದೆ.
ಬೆಂಗಳೂರು (ಮಾ. 24): ಒಂದೆಡೆ ವ್ಯಾಪಾರ ಧರ್ಮಯುದ್ಧ ನಡೆಯುತ್ತಿದ್ದರೆ, ಇನ್ನೊಂದೆಡೆ ಸೌಹರ್ದತೆಯ ಮಾತು ಕೇಳಿ ಬರುತ್ತಿದೆ. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (Bappanadu Durga Parameshwari) ಆಡಳಿತ ಮಂಡಳಿ, ಕೊನೆಯ ದಿನದ ಜಾತ್ರೆಗೆ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಿದೆ.
'ಹಲವಾರು ವರ್ಷಗಳಿಂದ ವ್ಯಾಪಾರ ಮಾಡುವ ಮುಸ್ಲಿಂ ವರ್ತಕರಿಗೆ ನಮ್ಮ ನಿರ್ಬಂಧವಿಲ್ಲ, ಹೊರಗೆ ಇರುವ ಬ್ಯಾನರ್ಗೂ, ನಮಗೂ ಸಂಬಂಧವಿಲ್ಲ. ನಾವು ಮುಸ್ಲಿಂ ವ್ಯಾಪಾರಿಗಳನ್ನು ತಡೆಯುವುದಿಲ್ಲ ಎಂದಿದೆ. ಹಾಗಾದರೆ ಮುಸ್ಲಿಮರು ವ್ಯಾಪಾರಕ್ಕೆ ಬರ್ತಾರಾ..?