ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲ್ಸ, ರಾತ್ರಿ ಆದ್ರೆ ಓದು.. ಆದ್ರೆ ಆತ ಗೆದ್ದಿದ್ದು ಬರೋಬ್ಬರಿ 50 ಲಕ್ಷ!

ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲ್ಸ, ರಾತ್ರಿ ಆದ್ರೆ ಓದು.. ಆದ್ರೆ ಆತ ಗೆದ್ದಿದ್ದು ಬರೋಬ್ಬರಿ 50 ಲಕ್ಷ!

Published : Jan 16, 2025, 04:14 PM IST

ನಾನು ಎರಡ್ಮೂರು ಸಲ ಪ್ರಯತ್ನಿಸಿ ನಂತರ ಯಶಸ್ಸು ಕಂಡಿದ್ದೇನೆ. ಬಹಳ ಕಷ್ಟವೆನಿಸಿತ್ತು. ಅಡಿಯನ್ಸ್ ಬೆಂಬಲದಿಂದ ಎಲ್ಲ ಸಾಧ್ಯವಾಗಿದೆ. ಯಾರು ಶ್ರಮಪಡ್ತಾರೆ, ರಮಜಾನ್ ಆಗಿ ನನ್ನ ಮುಂದೆ ಕೂರುತ್ತಾರೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಕ್ಕೆ ಖುಷಿಯಾಯ್ತು.

ಬಾಗಲಕೋಟೆ (ಜ.16): ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿ ಗೆದ್ದಿದ್ದಾನೆ ಬಾಗಲಕೋಟೆಯ ಯುವಕ. ನಟ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ರಮಜಾನ್ ಅನ್ನೋ ಯುವಕ ಬರೋಬ್ಬರಿ 50 ಲಕ್ಷ ಹಣ ಗೆದ್ದುಕೊಂಡಿದ್ದಾನೆ. ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಇಂದು ಬರೋಬ್ಬರಿ 50 ಲಕ್ಷ ಹಣ ಗೆದ್ದುಕೊಂಡಿದ್ದಾನೆ. ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲ್ಸ, ರಾತ್ರಿಯಾದ್ರೆ ಓದುತ್ತಿದ್ದ ಯುವಕ ಬಡತನದ ಮಧ್ಯೆ ಜೀವನ ಸಾಗಿಸುತ್ತಿದ್ದ. ಹೋದಲ್ಲಿ, ಬಂದಲ್ಲಿ ಅಮಿತಾ ಬಚನ್ ಅಂತ ಟಿಂಗಲ್ ಮಾಡಿದವರಿಗೆ ಇಂದು ಅದೇ ಅಮಿತಾ ಬಚನ್​ ನಡೆಸಿಕೊಡುವ ಶೋನಲ್ಲಿ 50 ಲಕ್ಷ ಹಣ ಗೆದ್ದು ಸಾಧಿಸಿ ತೋರಿಸಿದ್ದಾನೆ ಈ ರಮಜಾನ್. 

ನಾನು ಎರಡ್ಮೂರು ಸಲ ಪ್ರಯತ್ನಿಸಿ ನಂತರ ಯಶಸ್ಸು ಕಂಡಿದ್ದೇನೆ. ಬಹಳ ಕಷ್ಟವೆನಿಸಿತ್ತು. ಅಡಿಯನ್ಸ್ ಬೆಂಬಲದಿಂದ ಎಲ್ಲ ಸಾಧ್ಯವಾಗಿದೆ. ಯಾರು ಶ್ರಮಪಡ್ತಾರೆ, ರಮಜಾನ್ ಆಗಿ ನನ್ನ ಮುಂದೆ ಕೂರುತ್ತಾರೆ ಎಂದು ಅಮಿತಾ ಬಚನ್ ಹೇಳಿದ್ದಕ್ಕೆ ಖುಷಿಯಾಯ್ತು. ಮನೆಯ ಆರ್ಥಿಕ ಸ್ಥಿತಿ ಬದಲಾವಣೆ ಮಾಡಬೇಕು ನನ್ನ ಹಾಗೂ ಸಹೋದರ ಸಹೋದರಿ ಓದಿಗೆ ಹಣ ಬಳಸಬೇಕು. ಜನ್ರ ಮಾತು ಕೇಳದೇ ಮುನ್ನುಗ್ಗಿ ಸಾಧಿಸಿ ಎಂದು ಏಷಿಯಾನೆಟ್ ಸುವರ್ಣನ್ಯೂಸ್ ಜೊತೆ ರಮಜಾನ್ ಮನವಿ ಮಾಡಿದ್ದಾನೆ. 

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more