ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲ್ಸ, ರಾತ್ರಿ ಆದ್ರೆ ಓದು.. ಆದ್ರೆ ಆತ ಗೆದ್ದಿದ್ದು ಬರೋಬ್ಬರಿ 50 ಲಕ್ಷ!

ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲ್ಸ, ರಾತ್ರಿ ಆದ್ರೆ ಓದು.. ಆದ್ರೆ ಆತ ಗೆದ್ದಿದ್ದು ಬರೋಬ್ಬರಿ 50 ಲಕ್ಷ!

Published : Jan 16, 2025, 04:14 PM IST

ನಾನು ಎರಡ್ಮೂರು ಸಲ ಪ್ರಯತ್ನಿಸಿ ನಂತರ ಯಶಸ್ಸು ಕಂಡಿದ್ದೇನೆ. ಬಹಳ ಕಷ್ಟವೆನಿಸಿತ್ತು. ಅಡಿಯನ್ಸ್ ಬೆಂಬಲದಿಂದ ಎಲ್ಲ ಸಾಧ್ಯವಾಗಿದೆ. ಯಾರು ಶ್ರಮಪಡ್ತಾರೆ, ರಮಜಾನ್ ಆಗಿ ನನ್ನ ಮುಂದೆ ಕೂರುತ್ತಾರೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಕ್ಕೆ ಖುಷಿಯಾಯ್ತು.

ಬಾಗಲಕೋಟೆ (ಜ.16): ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿ ಗೆದ್ದಿದ್ದಾನೆ ಬಾಗಲಕೋಟೆಯ ಯುವಕ. ನಟ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ರಮಜಾನ್ ಅನ್ನೋ ಯುವಕ ಬರೋಬ್ಬರಿ 50 ಲಕ್ಷ ಹಣ ಗೆದ್ದುಕೊಂಡಿದ್ದಾನೆ. ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಇಂದು ಬರೋಬ್ಬರಿ 50 ಲಕ್ಷ ಹಣ ಗೆದ್ದುಕೊಂಡಿದ್ದಾನೆ. ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲ್ಸ, ರಾತ್ರಿಯಾದ್ರೆ ಓದುತ್ತಿದ್ದ ಯುವಕ ಬಡತನದ ಮಧ್ಯೆ ಜೀವನ ಸಾಗಿಸುತ್ತಿದ್ದ. ಹೋದಲ್ಲಿ, ಬಂದಲ್ಲಿ ಅಮಿತಾ ಬಚನ್ ಅಂತ ಟಿಂಗಲ್ ಮಾಡಿದವರಿಗೆ ಇಂದು ಅದೇ ಅಮಿತಾ ಬಚನ್​ ನಡೆಸಿಕೊಡುವ ಶೋನಲ್ಲಿ 50 ಲಕ್ಷ ಹಣ ಗೆದ್ದು ಸಾಧಿಸಿ ತೋರಿಸಿದ್ದಾನೆ ಈ ರಮಜಾನ್. 

ನಾನು ಎರಡ್ಮೂರು ಸಲ ಪ್ರಯತ್ನಿಸಿ ನಂತರ ಯಶಸ್ಸು ಕಂಡಿದ್ದೇನೆ. ಬಹಳ ಕಷ್ಟವೆನಿಸಿತ್ತು. ಅಡಿಯನ್ಸ್ ಬೆಂಬಲದಿಂದ ಎಲ್ಲ ಸಾಧ್ಯವಾಗಿದೆ. ಯಾರು ಶ್ರಮಪಡ್ತಾರೆ, ರಮಜಾನ್ ಆಗಿ ನನ್ನ ಮುಂದೆ ಕೂರುತ್ತಾರೆ ಎಂದು ಅಮಿತಾ ಬಚನ್ ಹೇಳಿದ್ದಕ್ಕೆ ಖುಷಿಯಾಯ್ತು. ಮನೆಯ ಆರ್ಥಿಕ ಸ್ಥಿತಿ ಬದಲಾವಣೆ ಮಾಡಬೇಕು ನನ್ನ ಹಾಗೂ ಸಹೋದರ ಸಹೋದರಿ ಓದಿಗೆ ಹಣ ಬಳಸಬೇಕು. ಜನ್ರ ಮಾತು ಕೇಳದೇ ಮುನ್ನುಗ್ಗಿ ಸಾಧಿಸಿ ಎಂದು ಏಷಿಯಾನೆಟ್ ಸುವರ್ಣನ್ಯೂಸ್ ಜೊತೆ ರಮಜಾನ್ ಮನವಿ ಮಾಡಿದ್ದಾನೆ. 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more