ರಾಜಾಹುಲಿ ಯಡಿಯೂರಪ್ಪನವರಿಗೆ ಅಮಿತ್ ಶಾ ಅಭಯ ನೀಡಿದ್ದೇಕೆ?

May 31, 2020, 6:14 PM IST

ಬೆಂಗಳೂರು(ಮೇ.31): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದಂಡುಕಟ್ಟಿ ಬಂಡೆದ್ದವರೆಲ್ಲ ಇದೀಗ ಥಂಡಾ ಹೊಡೆದಿದ್ದಾರೆ. ಹೈಕಮಾಂಡ್ ಅಮಿತ್ ಶಾ ಒಂದು ಕರೆ ರಾಜಾಹುಲಿಗೆ ಭೀಮಬಲ ಬಂದಂತಾಗಿದೆ.

ಕೇವಲ 24 ಗಂಟೆಗಳೊಳಗಾಗಿ 27 ಉತ್ತರ ಕರ್ನಾಟಕ ಶಾಸಕರ ಭಿನ್ನಮತ ಶಮನವಾಗಿದೆ. ರಾಜಾಹುಲಿಯ ಖದರ್ರೇ ಹಾಗೆ. ಪೆಟ್ಟು ಬಿದ್ದಷ್ಟು ಮತ್ತೆ ಮತ್ತೆ ಗಟ್ಟಿಯಾಗುತ್ತೆ. ಯಡಿಯೂರಪ್ಪನವರ ಮುಖ್ಯಮಂತ್ರಿ ಕುರ್ಚಿಗೆ ಕಂಟಕ ತಂದೊಡ್ಡಲು ಹೊರಟವರು ಇದೀಗ ಕಂಗಾಲಾಗಿ ಹೋಗಿದ್ದಾರೆ.

ಸುವರ್ಣ ಫೋಕಸ್: ಹಠವಾದಿ ಮೋದಿ

ಬಿಎಸ್‌ವೈ ವಿರುದ್ಧ ಬಂಡಾಯದ ಬಾವುಟ ಹಾರಿಸಿದವರು ಥಂಡಾ ಹೊಡೆದಿದ್ದು ಏಕೆ? ಬೇಟೆಯಾಡಲು ಬಂದವರೇ ಬೇಟೆಯಾಗಿ ಹೋಗಿದ್ದು ಹೇಗೆ? ಬಿಎಸ್‌ವೈ ಬೆನ್ನಿಗೆ ಹೈಕಮಾಂಡ್ ನಿಂತಿದ್ದೇಕೆ? ಈ ಎಲ್ಲಾ ಕುತೂಹಲಗಳಿಗೆ ಉತ್ತರ ಸುವರ್ಣ ಫೋಕಸ್‌ನಲ್ಲಿ ನೋಡಿ.