ಇಂದು ಭ್ರಷ್ಟರ ಕೋಟೆಗೆ ಎಸಿಬಿ (ACB Raid) ದಾಳಿ ಮಾಡಿದೆ. ಅಕ್ರಮವಾಗಿ ಹಣ ಮಾಡಿದ ಭ್ರಷ್ಟರ ಚಳಿ ಬಿಡಿಸಿದೆ. ಕಲಬುರ್ಗಿಯ PWD ಅಧಿಕಾರಿ ಶಾಂತನಗೌಡ ಮನೆಗೆ ದಾಳಿ ನಡೆಸಿದ್ದಾರೆ.
ಬೆಂಗಳೂರು (ನ. 24): ಇಂದು ಭ್ರಷ್ಟರ ಕೋಟೆಗೆ ಎಸಿಬಿ ದಾಳಿ (ACB Raid) ಮಾಡಿದೆ. ಅಕ್ರಮವಾಗಿ ಹಣ ಮಾಡಿದ ಭ್ರಷ್ಟರ ಚಳಿ ಬಿಡಿಸಿದೆ. ಕಲಬುರ್ಗಿಯ (Kalburgi) PWD ಅಧಿಕಾರಿ ಶಾಂತನಗೌಡ ಮನೆಗೆ ದಾಳಿ ನಡೆಸಿದ್ದಾರೆ.
ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಮನೆಯಲ್ಲಿದ್ದ ಹಣವನ್ನು ಎಲ್ಲಿ ಬಚ್ಚಿಡಬೇಕೆಂದು ಗೊತ್ತಾಗದೇ, ಮನೆಯ ಪೈಪ್ನಲ್ಲಿ (Water Pipe) ತುರುಕಿದ್ದಾನೆ. ಆದರೆ ಎಸಿಬಿ ಅಧಿಕಾರಿಗಳು ಇದನ್ನು ಪತ್ತೆ ಹಚ್ಚಿದ್ದು, ಪೈಪ್ ಕಟ್ ಮಾಡಿ ಕಂತೆ ಕಂತೆ ಹಣ ಹೊರ ತಂದಿದ್ದಾರೆ. ತೆಗೆದಷ್ಟು ಕಂತೆ ಕಂತೆ ಹಣ ಹೊರ ಬಂದಿದೆ. ಸುಮಾರು 25 ಲಕ್ಷ ರೂ ಹಣ ಪತ್ತೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.