ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೊರೋನಾ (Covid 19) ಸ್ಫೋಟಗೊಂಡಿದೆ. ಪ್ರಾಂಶುಪಾಲರು ಸೇರಿ 32 ಮಕ್ಕಳಿಗೆ ಕೊರೋನಾ ಪಾಸಿಟಿವ್ (Corona Positive) ಬಂದಿದೆ. ಚನ್ನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ದಾವಣಗೆರೆ (ಜ. 11): ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೊರೋನಾ (Covid 19) ಸ್ಫೋಟಗೊಂಡಿದೆ. ಪ್ರಾಂಶುಪಾಲರು ಸೇರಿ 32 ಮಕ್ಕಳಿಗೆ ಕೊರೋನಾ ಪಾಸಿಟಿವ್ (Corona Positive) ಬಂದಿದೆ. ಚನ್ನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಚಾಮರಾಜನಗರದಲ್ಲಿ(Chamarajanagar) ಓಂ ಶಕ್ತಿ ಯಾತ್ರೆಗೆ ಹೋದ ಒಂದೇ ಗ್ರಾಮದ 22 ಮಂದಿಗೆ ಸೋಂಕು ಬಂದಿದೆ. ಗ್ರಾಮದಲ್ಲಿ ಆತಂಕ ಶುರುವಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿಯವರಿಗೂ (Basavaraj Bommai) ಕೊರೋನಾ ಸೋಂಕು ತಗುಲಿದೆ. ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.