Shivamogga : ಕೇಳುವವರೇ ಇಲ್ಲ ಶರಾವತಿ ಹಿನ್ನೀರಿನ ದ್ವೀಪವಾಸಿಗಳ ಗೋಳು!

Shivamogga : ಕೇಳುವವರೇ ಇಲ್ಲ ಶರಾವತಿ ಹಿನ್ನೀರಿನ ದ್ವೀಪವಾಸಿಗಳ ಗೋಳು!

Suvarna News   | Asianet News
Published : Dec 17, 2021, 10:20 PM ISTUpdated : Dec 17, 2021, 10:34 PM IST

ಪ್ರತಿ ಸೌಲಭ್ಯ ಪಡೆಯಲು ಇಲ್ಲಿ ಹೋರಾಟ ಅನಿವಾರ್ಯ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ವಾಸಿಗಳು
ಕಳೆದ 25 ದಿನಗಳಿಂದ 108 ಆ್ಯಂಬುಲೆನ್ಸ್ ಸೇವೆಯೂ ಸ್ಥಗಿತ
 

ಶಿವಮೊಗ್ಗ (ಡಿ. 17): ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ (shivamogga) ನೋಡೋಕೆ ಸ್ವರ್ಗ. ಆದರೆ, ಇಲ್ಲಿ ಶರಾವತಿ ಹಿನ್ನೀರಿನ (Sharavathi Backwaters ) ದ್ವೀಪವಾಸಿಗಳ ಜೀವನ ನಿತ್ಯ ನರಕ. ಪ್ರತಿ ಸೌಲಭ್ಯ ಪಡೆಯಲು ಇಲ್ಲಿನ ಹೋರಾಟ ಮಾಡೋದು ಅನಿವಾರ್ಯವಾಗಿಬಿಟ್ಟಿದೆ.  ಕಳೆದ 25 ದಿನದಿಂದ 108 ಆ್ಯಂಬುಲೆನ್ಸ್ (Ambulance) ಸೇವೆ ಸ್ಥಗಿತಗೊಂಡು ನಿನ್ನೆ ತಡರಾತ್ರಿ  ಗರ್ಭಿಣಿ , ಅಪಘಾತದ ಗಾಯಾಳು ಸಂಕಷ್ಟ ಎದುರಿಸಿದ್ದಾರೆ. ಸಾಗರ ತಾಲೂಕಿನ ತುಮರಿ (Tumari) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ 108   ಆ್ಯಂಬುಲೆನ್ಸ್ ಸೇವೆ ಹಾಳಾಗಿ ಅಂದಾಜು 1 ತಿಂಗಳಾಗುತ್ತಾ ಬಂದಿದ್ದರೂ, ಇಲ್ಲಿಯವರೆಗೂ ಸರಿಹೋಗುವ ಲಕ್ಷಣ ಕಂಡಿಲ್ಲ. ಇದರ ಪರಿಣಾಮವಾಗಿ ತುರ್ತು ಸೇವೆಗೆ ಆ್ಯಂಬುಲೆನ್ಸ್ ಅನ್ನೇ ನೆಚ್ಚಿಕೊಂಡಿರುವ 8 ಪಂಚಾಯತ್ ವ್ಯಾಪ್ತಿಯ 20 ಸಾವಿರಕ್ಕೂ ಅಧಿಕ ಜನರ ಕಷ್ಟ ಹೇಳತೀರದಾಗಿದೆ.

Shivamogga Infrastructure Issue: : 108 ಆ್ಯಂಬುಲೆನ್ಸ್‌ ಕೊರತೆ : ಶರಾವತಿ ಹಿನ್ನೀರು ಜನರ ಗೋಳಿಗೆ ಕೊನೆ ಎಂದು?
ಸಂಜೆ 6 ಗಂಟೆಗೆ ಲಾಂಚ್ ಸ್ಥಗಿತಗೊಂಡರೆ, ಇಡೀ ತಾಲೂಕಿನ ನರನಾಡಿಯೇ ಕಡಿದಂತಾಗುತ್ತದೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಸಾಗರ (Sagar) ತಾಲೂಕು ಆಸ್ಪತ್ರೆಗೆ ಹೋಗಬೇಕೆಂದಿದ್ದಲ್ಲಿ ನಿಟ್ಟೂರು-ಹೊಸನಗರ ಅಥವಾ ಕೋಗಾರ್- ಕಾರ್ಗಲ್ ಮೂಲಕ ಹಿನ್ನೀರ ವಾಸಿಗಳು ಸಾಗರ ತಲುಪಬೇಕಿದೆ. ಕೆಲ ದಿನದ ಹಿಂದೆ ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಇಡೀ ಹಿನ್ನೀರಿನ ವಾಸಿಗಳು ಪರದಾಟ ನಡೆಸಿದ್ದರೆ, ಅದೇ ಸಮಯದಲ್ಲಿ ಚದರವಳ್ಳಿಯ ಚೈತ್ರಾ ಎನ್ನುವ ಹೆಂಗಸಿಗೆ ಹೆರಿಗೆಯಾಗಿದ್ದರಿಂದ ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡಲಾಗಿತ್ತು. ಆ ಕಾರಣದಿಂದಾಗಿ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತವಾಗಿರುವ 108 ಆ್ಯಂಬುಲೆನ್ಸ್  ನೀಡಬೇಕೆಂದು ಸ್ಥಳೀಯ ಜನರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅದರೊಂದಿಗೆ ಕೇಂದ್ರದಲ್ಲಿ ಕೆಲ ವೈದ್ಯಕೀಯ ಸೇವೆಗಳನ್ನೂ ಹೆಚ್ಚಿಸುವಂತೆ ಜನರು ಆಗ್ರಹ ಮಾಡಿದ್ದಾರೆ. 

06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
25:08ಕಾಲೇಜಿಗೆ ಹೋದ ಚಂದನದ ಗೊಂಬೆಯಂಥಾ ಮಗಳು ಶವವಾಗಿ ಪತ್ತೆ! ಕೈ-ಹಿಡಿದು ಕಾಲುವೆಗೆ ಹಾರಿದವ ಬದುಕಿಬಂದ!
05:40ಶಿವಮೊಗ್ಗದಲ್ಲಿ ಅಮಾನವೀಯ ಘಟನೆ: 67 ವರ್ಷದ ವೃದ್ಧೆಯನ್ನು ಮರಕ್ಕೆ ಕಟ್ಟಿ ಹಲ್ಲೆ
03:03ಭದ್ರಾವತಿಯಲ್ಲಿ ರೌಡಿಗಳ ಮಚ್ಚಿನ ಆರ್ಭಟ: ದೇವಾಲಯದಲ್ಲಿ ಮಚ್ಚಿಗೆ ಪೂಜೆ ಮಾಡಿಸಿ ಕೊಲೆಗೆ ಸ್ಕೆಚ್!
03:58ರಿಪಬ್ಲಿಕ್ ಆಫ್ ಭದ್ರಾವತಿಯ ಭಾಗ-3: ಅಮಾಯಕರ ಮೇಲೆ ಪೊಲೀಸರ ಕ್ರೌರ್ಯ
04:40ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದ್ಯಾ! ನಡುರಸ್ತೆಯಲ್ಲೇ ಕಾನೂನಿನ ಅಪಹಾಸ್ಯ!
41:28ಶಾಸಕನ ಮಗನ ದರ್ಬಾರ್, ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ
04:34ಶಿವಮೊಗ್ಗದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಬೇಸತ್ತ ಆಟೋ ಚಾಲಕನಿಂದ ಆತ್ಮಹತ್ಯೆ ಯತ್ನ!
02:10Uttara Kannada:ಸಿದ್ಧಾಪುರದಲ್ಲಿ ಹಿಟ್ ಆ್ಯಂಡ್ ರನ್; ಅಯ್ಯಪ್ಪ ಭಕ್ತರ ಮೇಲೆ ಹರಿದ ಕಾರು, ಓರ್ವ ಮಹಿಳೆ ಸಾವು
Read more