ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ, ಬಾನಂಗಳದಲ್ಲಿ ಕೌತುಕ, ಯಾರಿಗೆಲ್ಲಾ ಅಪಾಯ?

ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ, ಬಾನಂಗಳದಲ್ಲಿ ಕೌತುಕ, ಯಾರಿಗೆಲ್ಲಾ ಅಪಾಯ?

Published : Sep 06, 2025, 03:49 PM IST
ಭಾನುವಾರ ರಾತ್ರಿ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದ್ದು, ಭಾರತದಲ್ಲೂ ಗೋಚರಿಸಲಿದೆ. ದೇವಸ್ಥಾನಗಳು ಬಂದ್ ಆಗಲಿದ್ದು, ಗ್ರಹಣದ ಶುಭಾಶುಭ ಫಲಗಳ ಚರ್ಚೆ ಜೋರಾಗಿದೆ. ರಾಜಕೀಯ ವಿಪ್ಲವ ಮತ್ತು ಪ್ರಾಕೃತಿಕ ಅವಘಡಗಳ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಭಾನುವಾರ ರಣರಣ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿದೆ. ಬಾನಂಗಳದಲ್ಲಿ ಕೌತುಕ ಮೂಡುತ್ತಿದ್ರು ಹಲವರಿಗೆ ಸಂಕಷ್ಟ ಗ್ಯಾರಂಟಿ ಎನ್ನಲಾಗ್ತಿದೆ. ಭಾರತದಲ್ಲಿ ಗ್ರಹಣ ಗೋಚರವಾಗ್ತಿದ್ದು. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ದೇವಸ್ಥಾನಗಳು ಬಂದ್ ಆಗಲಿವೆ. ನಾಳೆ ಬಾನಂಗಳದಲ್ಲಿ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣಕ್ಕೆ ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ. 2025ರ ಕೊನೆಯ ಗ್ರಹಣ ಯಾರಿಗೆ ಶುಭ, ಯಾರಿಗೆ ಅಶುಭ ಅನ್ನೋದರ ಲೆಕ್ಕಾಚಾರ ಜೋರಾಗಿದೆ. ಬ್ಲಡ್‌ ಮೂನ್‌ನಿಂದಲೇ ಸಾಲು ಸಾಲು ಅಪಾಯದ ಸರಮಾಲೆ ಸೃಷ್ಟಿಯಾಗಲಿದೆ ಅನ್ನೋ ಮುನ್ಸೂಚನೆ ಸಿಕ್ತಿದೆ. ಭಾನುವಾರ ರಾತ್ರಿ 9.27ಕ್ಕೆ ಗ್ರಹಣ ಪ್ರಾರಂಭವಾಗಲಿದೆ. ಗ್ರಹಣಕ್ಕೂ ಮುನ್ನವೇ ಪೂಜೆ ಪುನಸ್ಕಾರ ನಡೆಯಲಿದೆ.

  • ಗ್ರಹಣ ಸ್ವರ್ಶಕಾಲ ರಾತ್ರಿ 9.27
  • ಗ್ರಹಣ ಮಧ್ಯಕಾಲ ರಾತ್ರಿ 11.41
  • ಗ್ರಹಣ ಮೋಕ್ಷ ತಡರಾತ್ರಿ 1.26
  • ಗ್ರಹಣದ ಸಂಪೂರ್ಣ ಕಾಲ 3.29 ನಿಮಿಷ

ಭಾರತದಲ್ಲಿ ಈ ಗ್ರಹಣ ಗೋಚರಿಸಲಿದೆ. ಇದರ ಜೊತೆ ಏಷ್ಯಾ, ಆಸ್ಟ್ರೇಲಿಯಾ, ಮತ್ತು ಯುರೋಪಿನ ಹೆಚ್ಚಿನ ಭಾಗಗಳಲ್ಲಿ ಗೋಚರವಾಗಲಿದೆ. ಇನ್ನು ಉತ್ತರ ಅಮೆರಿಕಾದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಆದರೆ ಅಲಾಸ್ಕಾ ಮತ್ತು ಪೆಸಿಫಿಕ್‌ನ ಕೆಲವು ಭಾಗಗಳಲ್ಲಿ ಭಾಗಶಃ ಕಾಣಿಸಲಿದೆ.

ರಾಹುಗ್ರಸ್ತ ಚಂದ್ರಗಹಣ ಕಾರಣ ಬೆಂಗಳೂರು ಸೇರಿದಂತೆ ಹಲವು ಕಡೆ ದೇಗುಲಗಳು ಬಂದ್ ಆಗಲಿವೆ. ನಾಳೆ ಸಂಜೆ ಗ್ರಜಹಣಕ್ಕೂ ಮುಂಚೆ ಪೂಜೆ ನಡೆಯಲಿದೆ. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಸೋಮವಾರ ಬೆಳಗಿನ ಜಾವ ಜಾವದಿಂದಲೇ ಶುದ್ಧೀಕರಣ ಪ್ರಾರಂಭವಾಗಲಿದೆ. ನಂತರ ವಿಶೇಷ ಪೂಜೆ ಆಯೋಜಿಸಲಾಗಿದೆ.

ಈ ಗ್ರಹಣದಿಂದ ರಾಜಕೀಯ ವಿಪ್ಲವ ಮತ್ತು ಪ್ರಾಕೃತಿಕ ಅವಘಡಗಳು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.ಈಗಾಗಲೇ ಚಂದ್ರಗ್ರಹಣಕ್ಕೂ ಮುನ್ನವೇ ದೇಶದ ಹಲವೆಡೆ ಪ್ರಕೃತಿ ಮುನಿಸು ಬೀರಿದೆ.ಹಲವು ಕಡೆಗಳಲ್ಲಿ ಅಲ್ಲೋಲ..ಕಲ್ಲೋಲವೇ ಸೃಷ್ಟಿಯಾಗಿದೆ. ಭೀಕರ ಮಳೆ..ಬೆಲೆ ನಾಶ.ಅಷ್ಟೇ ಅಲ್ಲ ಪ್ರವಾದಿಂದ ಜನರ ಬದುಕೇ ದುಸ್ಥಿತಿಗೆ ಬಂದಿದೆ. ಉತ್ತರ ಭಾರದಲ್ಲಿ ಮೇಘಸ್ಫೋಟಕ್ಕೆ ಜೀವಗಳೇ ಬಲಿಯಾದ್ರೆ. ಮನೆಗಳು ಕೊಚ್ಚಿ ಹೋಗ್ತಿವೆ.. ಇದರ ಜೊತೆಗೆ ದೆಹಲಿಯಲ್ಲೂ ಹಲವು ಕಡೆ ಪ್ರವಾಹ ಸಂಕಷ್ಟಕ್ಕೆ ಜನ ತತ್ತರಿಸಿದ್ದಾರೆ. ಇನ್ನು ತಾಲಿಬಾನ್‌ನಲ್ಲಿ ಭೂಮಿ ನಡುಗಿ ಒಂದೂವರೆ ಸಾವಿರ ಮಂದಿ ಬಲಿಯಾಗಿದ್ದು ಮತ್ತಷ್ಟು ಪ್ರಳಯಗಳು ಸೃಷ್ಟಿಯಾಗೋದು ಗ್ಯಾರಂಟಿ.. ಭಯ ಪಡೋದು ಬೇಡ ಅಂತಿರೋ ಜೋತಿಷಿಗಳು ಎಚ್ಚರಿಕೆ ಅಗತ್ಯ ಅನ್ನೋ ಸಂದೇಶ ನೀಡ್ತಿದ್ದಾರೆ.

20:18ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!
19:41Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
18:40ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?
19:51ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?
19:30ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?
52:41Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ
06:22ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ
02:50ಸೂರ್ಯನತ್ತ ‘ಆದಿತ್ಯ ಎಲ್-1’ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ರಾಕೆಟ್ ಉಡ್ಡಯನ
02:44ಭರದಿಂದ ಸಾಗ್ತಿದೆ ‘ಇಸ್ರೋ’ಸಂಶೋಧನಾ ಕಾರ್ಯ: ಚಂದ್ರನಲ್ಲಿ ಗಂಧಕ, ಆಮ್ಲಜನಕ ಪತ್ತೆ ಹಚ್ಚಿದ ರೋವರ್
Read more