ದರ್ಶನ್ ಬೇಲ್​ಗೆ ರೆಡಿಯಾಗಿದೆಯಾ ಮಾಸ್ಟರ್​ಪ್ಲಾನ್?: ಕೊಲೆಗೂ ನಟನಿ​ಗೂ ಸಂಬಂಧವಿಲ್ಲ! ಲಾಯರ್ ವಾದ

ದರ್ಶನ್ ಬೇಲ್​ಗೆ ರೆಡಿಯಾಗಿದೆಯಾ ಮಾಸ್ಟರ್​ಪ್ಲಾನ್?: ಕೊಲೆಗೂ ನಟನಿ​ಗೂ ಸಂಬಂಧವಿಲ್ಲ! ಲಾಯರ್ ವಾದ

Published : Oct 07, 2024, 11:17 AM IST

ದರ್ಶನ್ ಬೇಲ್ ಅರ್ಜಿಯ ವಿಚಾರಣೆ 67ನೇ ಸಿಸಿಎಚ್ ಕೋರ್ಟ್​​ನಲ್ಲಿ ಸತತವಾಗಿ ನಡೀತಾ ಇದೆ.  ದರ್ಶನ್ ಪರ ವಾದ ಮಂಡಿಸಿರೋ ವಕೀಲರು ಚಾರ್ಜ್​​ಶೀಟ್​ ನಲ್ಲಿರೋ ಲೋಪ ದೋಷಗಳನ್ನ ಪಟ್ಟಿ ಮಾಡಿ ಕೋರ್ಟ್ ಎದುರಿಗಿಟ್ಟಿದ್ದಾರೆ. 

ದರ್ಶನ್ ಬೇಲ್ ಅರ್ಜಿಯ ವಿಚಾರಣೆ 67ನೇ ಸಿಸಿಎಚ್ ಕೋರ್ಟ್​​ನಲ್ಲಿ ಸತತವಾಗಿ ನಡೀತಾ ಇದೆ.  ದರ್ಶನ್ ಪರ ವಾದ ಮಂಡಿಸಿರೋ ವಕೀಲರು ಚಾರ್ಜ್​​ಶೀಟ್​ ನಲ್ಲಿರೋ ಲೋಪ ದೋಷಗಳನ್ನ ಪಟ್ಟಿ ಮಾಡಿ ಕೋರ್ಟ್ ಎದುರಿಗಿಟ್ಟಿದ್ದಾರೆ. ಸದ್ಯ ನಡೀತಿರೊ ವಾದಮಂಡನೆ ನೋಡಿದ್ರೆ ದರ್ಶನ್​ಗೆ ಬೇಲ್ ಕೊಡಿಸೋಕೆ ಪಕ್ಕಾ ಮಾಸ್ಟರ್​​ ಪ್ಲಾನ್ ರೂಪಿಸಿದಂತಿದೆ.  67ನೇ ಸಿಸಿಎಚ್ ಕೋರ್ಟ್​ನಲ್ಲಿ ಇವತ್ತು ಕೂಡ ದರ್ಶನ್ ಬೇಲ್ ವಿಚಾರಣೆ ನಡೆದಿದೆ. ದರ್ಶನ್ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್ ವಾದಮಂಡನೆ ಮಾಡಿದ್ದಾರೆ. ಪೊಲೀಸರು ಸಲ್ಲಿಸಿರೋ ಚಾರ್ಜ್​​ಶೀಟ್​​ನಲ್ಲಿರೋ ಲೋಪ ದೋಷಗಳನ್ನೆಲ್ಲಾ ಪಟ್ಟಿಮಾಡಿಕೊಂಡಿರೋ ಸಿ ವಿ ನಾಗೇಶ್ ಕೋರ್ಟ್ ಮುಂದೆ ಅವುಗಳನ್ನ ಇಂಚಿಂಚಾಗಿ ಬಿಚ್ಚಿಡ್ತಾ ಇದ್ದಾರೆ. 

ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ದರ್ಶನ್ ಪಾತ್ರ ಇಲ್ಲವೇ ಅಂತ ಪ್ರೂವ್ ಮಾಡೋದಕ್ಕೆ ನಾನಾ ಸಾಕ್ಷಿಗಳನ್ನ ನ್ಯಾಯಾದೀಶರ ಮುಂದೆ ಪ್ರಸ್ತುತ ಪಡಿಸಿದ್ದಾರೆ. ರಸ್ತೆಬದಿಯಲ್ಲಿ ರೇಣುಕಾಸ್ವಾಮಿ ಮೃತದೇಹವನ್ನ ಬಿಸಾಡಲಾಗಿತ್ತು. ಜೂ.9ರ ಬೆಳಿಗ್ಗ 10 ಗಂಟೆಗೆ ದೂರನ್ನ ರಿಜಿಸ್ಟರ್ ಮಾಡಲಾಗಿದೆ. ತಕ್ಷಣವೇ ದೇಹದ ಮಹಜರು, ಪಂಚನಾಮೆ ಮಾಡಬೇಕಿತ್ತು. ಆದರೆ ಜೂ. 11ರ ಮಧ್ಯಾಹ್ನ ದೇಹದ ಮಹಜರು ಮಾಡಲಾಗಿದೆ. ಹೀಗೇಕೆ ಮಾಡಿದ್ರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಪೋಸ್ಟ್​ಮಾರ್ಟಂ ಕೂಡ ಜೂ. 11ರ ಮಧ್ಯಾಹ್ನ 2.45ಕ್ಕೆ ಮಾಡಲಾಗಿದೆ. ದೇಹದ ಐಡೆಂಟಿಟಿ ಆಗಿರಲಿಲ್ಲ ಎಂಬ ಸಬೂಬು ನೀಡಲಾಗಿದೆ. ಆದರೆ ಮಹಜರು ಮಾಡಲು ದೇಹದ ಐಡೆಂಟಿಟಿ ಏಕೆ ಬೇಕು’ ಅಂತ ಸಿ ವಿ ನಾಗೇಶ್ ಪ್ರಶ್ನೆ ಮಾಡಿದ್ದಾರೆ.

04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
Read more