ಮ್ಯಾಕ್ಸ್ ರಿಲೀಸ್ ಮೊದಲೇ ಮಹಾ ಸಿನಿಮಾಗೆ ಸಜ್ಜಾದ್ರಾ ಕಿಚ್ಚ?: ಯಶ್​​​​ಗೆ ಹೆಣೆದಿದ್ದ ಕಥೆಯಲ್ಲಿ ಸುದೀಪ್ ನಟಿಸುತ್ತಾರಾ?

ಮ್ಯಾಕ್ಸ್ ರಿಲೀಸ್ ಮೊದಲೇ ಮಹಾ ಸಿನಿಮಾಗೆ ಸಜ್ಜಾದ್ರಾ ಕಿಚ್ಚ?: ಯಶ್​​​​ಗೆ ಹೆಣೆದಿದ್ದ ಕಥೆಯಲ್ಲಿ ಸುದೀಪ್ ನಟಿಸುತ್ತಾರಾ?

Published : Oct 10, 2024, 04:02 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಡೈನಾಮಿಕ್ ಡೈರೆಕ್ಟರ್​ ನರ್ತನ್​​ ಜೊತೆಗಾಗಿ ಸಿನಿಮಾ ಮಾಡಿದ್ರೆ ಹೇಗಿರುತ್ತೆ,.? ಇಂಥದ್ದೊಂದು ಟಾಕ್​ ಎರಡು ವರ್ಷದ ಹಿಂದೆ ಎದ್ದಿತ್ತು. ಈಗ ಅದಕ್ಕೆ ಟೈಮ್ ಸೆಟ್​ ಆಗಿದೆಯಂತೆ.? ಕಿಚ್ಚ ನರ್ತನ್ ಕಾಂಬಿನೇಷನ್​ನಲ್ಲಿ ಸಿನಿಮಾ ಸೆಟ್ಟೇರುತ್ತಂತೆ. 
 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಡೈನಾಮಿಕ್ ಡೈರೆಕ್ಟರ್​ ನರ್ತನ್​​ ಜೊತೆಗಾಗಿ ಸಿನಿಮಾ ಮಾಡಿದ್ರೆ ಹೇಗಿರುತ್ತೆ,.? ಇಂಥದ್ದೊಂದು ಟಾಕ್​ ಎರಡು ವರ್ಷದ ಹಿಂದೆ ಎದ್ದಿತ್ತು. ಈಗ ಅದಕ್ಕೆ ಟೈಮ್ ಸೆಟ್​ ಆಗಿದೆಯಂತೆ.? ಕಿಚ್ಚ ನರ್ತನ್ ಕಾಂಬಿನೇಷನ್​ನಲ್ಲಿ ಸಿನಿಮಾ ಸೆಟ್ಟೇರುತ್ತಂತೆ. ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಯಶ್​​​ಗಾಗಿ ಸಿದ್ಧಪಡಿಸಿದ್ಧ ಕಥೆಯಲ್ಲಿ ಬಾದ್​​ಷಾ ನಟಿಸುತ್ತಾರಂತೆ..? ಹಾಗಾದ್ರೆ ಏನಿದು ಯಶ್​, ಕಿಚ್ಚ, ನರ್ತನ್ ಎಕ್ಸ್ ಕ್ಲ್ಯೂಸೀವ್ ​ಸ್ಟೋರಿ.. ಇಲ್ಲಿದೆ ನೋಡಿ. ಇಂಡಿಯನ್ ಸಿನಿ ಜಗತ್ತಿನ ಆರಡಿ ಕಟೌಟ್ ಕಿಚ್ಚ ಸುದೀಪ್​​​ ವಿಕ್ರಾಂತ್ ರೋಣ ಸಿನಿಮಾ ಬಳಿಕ ಕೈಗೆತ್ತಿಕೊಳ್ಳುತ್ತಿರೋ ಸಿನಿಮಾಗಳೆಲ್ಲಾ ದೇಶಾದ್ಯಂತ ಸೌಂಡ್ ಮಾಡುತ್ತಿವೆ. ಈಗ ಬಾದ್ ಷಾ ಮ್ಯಾಕ್ಸ್​ ರಿಲೀಸ್​ಗೆ ಡೇಟ್​​ ಹುಡುಕುತ್ತಿದ್ದಾರೆ. ಈ ಟೈಮ್​ನಲ್ಲೇ ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಪ್ಯಾನ್​​ ಇಂಡಿಯಾ ಕತೆ ಬ್ಲ್ಯಾಸ್ಟ್ ಆಗಿದೆ. ಅದು ಎರಡು ವರ್ಷದ ಹಿಂದೆ ಗುಲ್ಲೆದ್ದಿದ್ದ ಸುದ್ದಿಗೆ ಈಗ ಮರುಜೀವ ಬಂದಿದೆ. 

ಅದೇ ಮಫ್ತಿ ಡೈರೆಕ್ಟರ್​ ನರ್ಥನ್​ ಹಾಗು ಸುದೀಪ್ ಕಾಂಬಿನೇಷನ್​ನಲ್ಲಿ ಸಿನಿಮಾ ಬರುತ್ತೆ ಅನ್ನೋ ಗರ್ಮಾ ಗರಂ ವಿಚಾರ. ಡಿಸೆಂಬರ್​​ ಹೊತ್ತಿಗೆ ಕಿಚ್ಚನ ಮ್ಯಾಕ್ಸ್​​ ತೆರೆಗಪ್ಪಳಿಸುತ್ತೆ. ಅಷ್ಟರಲ್ಲಾಗಲೇ ಮಹಾ ಸಿನಿಮಾ ಒಂದಕ್ಕೆ ಬಾದ್ ಷಾ ಸಜ್ಜಾದಂತೆ ಕಾಣ್ತಿದೆ. ಯಾಕಂದ್ರೆ ಸುದೀಪ್​ ಕನ್ನಡದ ಕೆಆರ್​ಜಿ ಬ್ಯಾನರ್​ನಲ್ಲಿ ಸಿನಿಮಾ ಮಾಡೋ ಕಮಿಟ್ಮೆಂಟ್ ಇದೆ. ಈಗ ಆ ಕಮಿಟ್ಮೆಂಟ್​ಗೆ ಹಾಲೆರೆದು ನೀರೆರೆಯೋ ಡೈರೆಕ್ಟರ್​ ಯಾರು ಅನ್ನೋದಕ್ಕೆ ಉತ್ತರ ಸಿಕ್ಕಂತಿದೆ. ಕನ್ನಡದ ಸ್ಟಾರ್​ ಡೈರೆಕ್ಟರ್​ ನರ್ತನ್ ನೇಮ್​ ಫಿಕ್ಸ್ ಆಗಿದೆ. ನರ್ತನ್​.. ಒಂದೇ ಒಂದು ಮಫ್ತಿ ಸಿನಿಮಾದಿಂದ ಈ ಹೆಸ್ರು ಇಡೀ ಸೌತ್​ ಜಗತ್ತಿಗೇ ಗೊತ್ತು. ಈಗ ಭೈರತಿ ರಣಗಲ್​ ಮೂಲಕ ನರ್ತನ್​ ಮತ್ತೆ ಟಾಕ್​ ಆಫ್​ ದಿ ಟೌನ್ ಆಗಿದ್ದಾರೆ. ನರ್ತನ್ ಸಿನಿಮಾ ಸ್ಟೈಲ್​ ನೋಡಿ ಯಶ್ ಕೂಡ ಕಾಲ್​ ಶೀಟ್​ ಕೊಟ್ಟಿದ್ರು. 

ಕೆಜಿಎಫ್​ ಸಿನಿಮಾ ಬಳಿಕ ಯಶ್​ಗೆ ಆಕ್ಷನ್ ಕಟ್​ ಹೇಳೋದೇ ಈ ಡೈರೆಕ್ಟರ್​ ಅಂತ ಫಿಕ್ಸ್ ಆಗಿತ್ತು. ಅಂದಿನಿಂದ ಈ ಡೈನಾಮಿಕ್ ಡೈರೆಕ್ಟರ್ ಹೆಸ್ರು ಇಂಡಿಯಾ ತುಂಬೆಲ್ಲಾ ಸೌಂಡ್ ಮಾಡಿತ್ತು. ಯಶ್ ಕೂಡ ಎರಡು ವರ್ಷ ನರ್ತನ್​​ ಬಳಿ ಹಲವು ಕತೆ ಬರೆಸಿದ್ರು. ಆದ್ರೆ ಅದ್ಯಾಕೋ ಇಬ್ಬರ ಕಾಂಬಿನೇಷನ್​ ವರ್ಕ್​ ಆಗ್ಲಿಲ್ಲ. ಈಗ ನರ್ತನ್​ ಗುರಿ ಕಿಚ್ಚನ ಮೇಲಿದೆ. ಯಶ್​ ನರ್ತನ್​ರನ್ನ ಕೈ ಬಿಟ್ಟ ಮೇಲೆ ಕನ್ನಡದ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್​ ರನ್ನ ಮನದಲ್ಲಿಟ್ಟುಕೊಂಡು ನಿರ್ದೇಶಕ ನರ್ತನ್ ಕಥೆ ಹೆಣೆದಿದ್ದಾರೆ. ಆ ಕಥೆ ಕೇಳಿರೋ ಸುದೀಪ್ ಹಾಗು ಕೆಆರ್​​​ಜಿ ಪ್ರೊಡಕ್ಷನ್ ಹೌಸ್​ ಈ ಸಿನಿಮಾಗೆ ನೀವೇ ಸಾರಥಿ ಅಂತ ನರ್ತನ್​ರನ್ನ ಫಿಕ್ಸ್ ಮಾಡಿದ್ದಾರೆ ಅನ್ನೋ ಬಿಸಿ ಬಿಸಿ ಸುದ್ದಿ ಗಾಂಧಿನಗರ ತುಂಬೆಲ್ಲಾ ಬಿಕರಿ ಆಗುತ್ತಿದೆ. 

ಆದ್ರೆ ನರ್ತನ್​ ಹಾಗು ಕಿಚ್ಚನ ಕಾಂಬಿನೇಷನ್ ಮಧ್ಯೆ ಮತ್ತೊಂದು ಡೌಟ್ ಕೂಡ ಇದೆ. ಯಶ್​​ಗಾಗಿ ಸಿದ್ಧಪಡಿಸಿದ್ದ ಕತೆಯನ್ನ ನಿರ್ದೇಶಕ ನರ್ತನ್​ ಸುದೀಪ್​ಗೆ ಆಕ್ಷನ್ ಕಟ್ ಹೇಳುತ್ತಾರಾ ಅನ್ನೋದು.? ಇದರ ಮೂಲ ಹುಡುಕಿದಾಗ ಸಿಕ್ಕ ಉತ್ತರ, ಇಲ್ಲ ಇಲ್ಲ ಸುದೀಪ್ ಇಮೇಜ್​, ಸ್ಟೈಲೇ ಬೇರೆ. ಇದು ಕಿಚ್ಚನಿಗಾಗೆ ಸಿದ್ಧಪಡಿಸಿರೋ ಫ್ರೆಶ್ ಸ್ಟೋರಿ ಅನ್ನೋ ಉತ್ತರ ಸಿಕ್ಕಿದೆ. ಸಧ್ಯ ಸುದೀಪ್ ಮ್ಯಾಕ್ಸ್​​ ತೆರೆ ಮೇಲೆ ತರೋ ತವಕದಲ್ಲಿದ್ದಾರೆ. ಆ ಬಳಿಕ ಡಿಸೆಂಬರ್​​ನಿಂದ ಅನೂಪ್ ಭಂಡಾರಿ ಜೊತೆ ಬಿಲ್ಲ ರಂಗ ಬಾಷಾ ಸಿನಿಮಾದಲ್ಲಿ ಲಾಕ್ ಆಗಲಿದ್ದಾರೆ. ಈ ಸಿನಿಮಾ ಬಳಿಕವಷ್ಟೇ ಕಿಚ್ಚ ನರ್ತನ್​​​​​​​​ ಕಾಲ್​ ಶೀಟ್​ಗೆ ಕೈ ಹಾಕ್ತಾರೆ.

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more