ಅರುಣ್‌ ಸಿಂಗ್ ಕೈಯಲ್ಲಿ ಕಚೇರಿ ಉದ್ಘಾಟನೆ: ಚರ್ಚೆಗೆ ಕಾರಣವಾದ ಸಚಿವರ ' ಶಕ್ತಿ ಪ್ರದರ್ಶನ' ನಡೆ

Dec 6, 2020, 10:37 AM IST

ಬೆಂಗಳೂರು (ಡಿ. 06)ಕಮಲ ಪಾಳದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ರಿಂದ ಸಚಿವ ಸೋಮಣ್ಣ ಕಚೇರಿ ಉದ್ಘಾಟನೆಯಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‌ವೈ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‌ವೈ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಈ ಮೂಲಕ ಸೋಮಣ್ಣ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ? ಎಂಬ ಮಾತು ಕೇಳಿ ಬರುತ್ತಿದೆ.

ಕಾಂಗ್ರೆಸ್ ಖೆಡ್ಡಾದಲ್ಲಿ ಬೀಳಿಸಿ ಅಳಿಸಿ ಹಾಕಿದರು; ಮುರಿದ ಮೈತ್ರಿಯ ಅಸಲಿ ಕಾರಣ ಬಿಚ್ಚಿಟ್ಟ ಎಚ್‌ಡಿಕೆ

ಬಿಬಿಎಂಪಿ ಚುನಾವಣೆ ಕೂಡಾ ಹತ್ತಿರ ಬರುತ್ತಿದೆ. ಚುನಾವಣಾ ಉಸ್ತುವಾರಿಯನ್ನು ಬೆಂಗಳೂರಿನಲ್ಲಿ ಯಾರು ವಹಿಸಿಕೊಳ್ಳುತ್ತಾರೆ ಎಂಬ ಚರ್ಚೆಯೂ ಶುರುವಾಗಿದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸೋಮಣ್ಣ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಎದ್ದಿದೆ.