ಜಾರಕಿಹೊಳಿ ಸೀಡಿ VS ಮೇಟಿ ಸೀಡಿ; ಕಾಂಗ್ರೆಸ್ ಬ್ರಹ್ಮಾಸ್ತ್ರಕ್ಕೆ ಬಿಜೆಪಿ ಪ್ರತ್ಯಸ್ತ್ರ

Mar 24, 2021, 10:52 AM IST

ಬೆಂಗಳೂರು (ಮಾ. 24): ಜಾರಕಿಹೊಳಿ ರಾಸಲೀಲೆ ಸೀಡಿ ಕೇಸ್ ಕಳೆದೆರಡು ದಿನಗಳಿಂದ ಸದನದಲ್ಲಿ ಸದ್ದು ಮಾಡುತ್ತಿದೆ. ಸಿಜೆ ತನಿಖೆಗೆ ಕಾಂಗ್ರೆಸ್ ಬಿಗಿಪಟ್ಟು ಹಿಡಿದಿದೆ. ಕಾಂಗ್ರೆಸ್ - ಬಿಜೆಪಿ ನಾಯಕರ ನಡುವೆ ವಾಕ್ಸಮರ ನಡೆದಿದೆ. ಸಿದ್ದರಾಮಯ್ಯ , ಡಿಕೆಶಿ ಸೀಡಿ ಕೇಸ್ ವಿರುದ್ಧ ಕೇಸರಿ ಕಲಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. 

ಸೀಡಿ ಶಂಕಿತ ಕಿಂಗ್‌ಪಿನ್‌ಗಳ ಸಂಪರ್ಕದಲ್ಲಿದ್ದಾಳಾ ಯುವತಿ..?

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್‌.ವೈ. ಮೇಟಿ ಪ್ರಕರಣದಲ್ಲಿ ಕಾಂಗ್ರೆಸ್‌ ಸರ್ಕಾರವು ಅನುಸರಿಸಿದ ಮಾನದಂಡವನ್ನು ನಾವು ಇದೀಗ ರಮೇಶ್‌ ಜಾರಕಿಹೊಳಿ ಪ್ರಕರಣದಲ್ಲಿ ಅನುಸರಿಸಿದರೆ ಅದನ್ನು ತಪ್ಪು ಎಂಬಂತೆ ಕಾಂಗ್ರೆಸ್‌ ಬಿಂಬಿಸುತ್ತಿದೆ ಎಂದು ಗೃಹ ಹಾಗೂ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹರಿಹಾಯ್ದಿದ್ದಾರೆ.