'ಆರ್‌ಆರ್‌ ನಗರ ಹುಲಿಯನ್ನು ನಾವು ಗೆದ್ದೇ ಗೆಲ್ಲಿಸ್ತೀವಿ, ಕೈ ಕುತಂತ್ರವೆಲ್ಲಾ ಇಲ್ಲಿ ನಡೆಯಲ್ಲ'

Oct 30, 2020, 12:31 PM IST

ಬೆಂಗಳೂರು (ಅ. 30): ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಇಂದು ದರ್ಶನ್ ಪ್ರಚಾರ ಮಾಡಲಿದ್ದಾರೆ. ಯಶವಂತಪುರದಿಂದ ಪ್ರಚಾರವನ್ನು ಆರಂಭಿಸಲಿದ್ದಾರೆ. ಈ ವೇಳೆ ದರ್ಶನ್ ಅವರನ್ನು ನೋಡಲು, ಮುನಿರತ್ನ ಅವರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.

ರಾರಾದಲ್ಲಿ ಫೈಟ್ ಇರೋದು ಮುನಿರತ್ನ VS ಡಿಕೆ ಸುರೇಶ್ ನಡುವೆಯಾ? ಕುಸುಮಾ ನೆಪಮಾತ್ರ?

ಅವರನ್ನು ಮಾತನಾಡಿಸಿದಾಗ, ಕೆಲವರು ದರ್ಶನ್ ಅಣ್ಣನನ್ನು ನೋಡಲು ಬಂದಿದ್ದೇವೆ ಅಂದರೆ, ಇನ್ನು ಕೆಲವರು ಮುನಿರತ್ನ ಅಣ್ಣನನ್ನು ನೋಡಲು ಬಂದಿದ್ದೇವೆ ಎಂದರು. ರಾರಾ ಹುಲಿಯನ್ನು ನಾವು ಗೆದ್ದೇ ಗೆಲ್ಲಿಸುತ್ತೇವೆ. ನಮಗೆ ಅವರೇ ಮತ್ತೊಮ್ಮೆ ಆರಿಸಿ ಬರಬೇಕು ಎಂದರು.