'RR ನಗರದಲ್ಲಿ ಅಭಿವೃದ್ಧಿಯಾಗಿದ್ದು ಜನರದ್ದಾ? ಗೆದ್ದು ಹೋದವರದ್ದಾ'?

Oct 27, 2020, 9:48 AM IST

ಬೆಂಗಳೂರು (ಅ. 27): ಆರ್‌ಆರ್ ನಗರ ಉಪಚುನಾವಣಾ ಅಖಾಡದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ.  ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಡಿಕೆ ಸುರೇಶ್ ಪ್ರಚಾರ ನಡೆಸುವ ವೇಳೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

' ಜನರು ಬದಲಾವಣೆ ಬಯಸುವ ಉತ್ಸಾಹದಲ್ಲಿದ್ದಾರೆ. ಅಭಿವೃದ್ಧಿ ಹೆಸರನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ಭಾಗಗಳನ್ನು ನೋಡಿದರೆ ಯಾರ ಅಭಿವೃದ್ಧಿಯಾಗಿದೆ ಅನ್ನೋದು ಚರ್ಚೆಯಾಗಬೇಕಿದೆ. ಜನರ ಅಭಿವೃದ್ಧಿನಾ, ಗೆದ್ದು ಹೋದವರ ಅಭಿವೃದ್ಧಿನಾ, ಪಕ್ಷಕ್ಕೆ ಮೋಸ ಮಾಡಿ ಹೋದವರ ಅಭಿವೃದ್ಧಿನಾ? ಎಂದು ಮುನಿರತ್ನ ಹೆಸರು ಹೇಳದೇ ಟಾಂಗ್ ನೀಡಿದ್ದಾರೆ. 

ಶಿರಾ ಬೈ ಎಲೆಕ್ಷನ್: ಸಂದರ್ಶನದಲ್ಲಿ ಮಹತ್ವದ ವಿಷಯಗಳನ್ನು ಬಿಚ್ಚಿಟ್ಟ ವಿಜಯೇಂದ್ರ

ಜಾತಿ ರಾಜಕಾರಣ, ವೋಟರ್ ಐಡಿ ರಾಜಕಾರಣ ಮಾಡುವ ಕುಖ್ಯಾತಿ ಮುನಿರತ್ನ ಅವರದ್ದು. ನಾವು ಬಿಜೆಪಿಯವರನ್ನು ಕೇಳಿ ರಾಜಕಾರಣ ಮಾಡಬೇಕಿಲ್ಲ. ಅವರಿಗೆ ನೈತಿಕವಾದ ಹಕ್ಕಿಲ್ಲ' ಎಂದು ವಾಗ್ಧಾಳಿ ನಡೆಸಿದ್ದಾರೆ.