ನನ್ನನ್ನು ಜೈಲಿಗೆ ಕಳಿಸಲಿ, ನಾನು ಸಿದ್ಧ: ಸುಧಾಕರ್‌ಗೆ ರಮೇಶ್ ಕುಮಾರ್ ತೀಕ್ಷ್ಣ ತಿರುಗೇಟು

Oct 22, 2021, 12:56 PM IST

ವಿಜಯಪುರ, (ಅ.22):  ಜೈಲಿಗೆ ಹಾಕಿಸೋವರೆಗೂ ನಾನು ವಿರಮಿಸೋದಿಲ್ಲ ಎಂದಿದ್ದ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿರುಗೇಟು ಕೊಟ್ಟಿದ್ದಾರೆ.

ಡಿಸಿಸಿ ಬ್ಯಾಂಕ್‌ನಲ್ಲಿ ಭ್ರಷ್ಟಾಚಾರ: ರಮೇಶ್ ಕುಮಾರ್‌ರನ್ನು ಜೈಲಿಗೆ ಕಳ್ಸೋವರ್ಗು ಬಿಡಲ್ಲ: ಸುಧಾಕರ್

ವಿಜಯಪುರ ಕೋಲಾರ ಡಿಸಿಸಿ ಬ್ಯಾಂಕ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಸುಧಾಕರ್, ರಮೇಶ್ ಅವರನ್ನ ಜೈಲಿಗೆ ಕಳುಹಿಸುತ್ತೇನೆ ಎಂದಿದ್ದರು. ಇದೀಗ ರಮೇಶ್ ಕುಮಾರ್ ಇದಕ್ಕೆ ಪ್ರತಿಕ್ರಿಯಿಸಿದ್ದು, ನನ್ನನ್ನು ಜೈಲಿಗೆ ಕಳಿಸುವುದಿದ್ರೆ ಕಳಿಸಲಿ. ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ. ಜೈಲಿಗೆ ಹೋಗಲ್ಲ ಅಂದ್ರೆ ತಕರಾರು ಮಾಡ್ಬೇಕು ಎಂದು ತೀಕ್ಷ್ಣವಾಗಿ ಟಾಂಗ್ ಕೊಟ್ಟರು.