ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಅಲ್ಲೋಲ ಕಲ್ಲೋಲ, ರಾಹುಲ್ ಕಿಡಿ!

Aug 24, 2020, 4:01 PM IST

ನವದೆಹಲಿ(ಆ.24):  ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಸೋನಿಯಾ ರಾಜೀನಾಮೆ ಬೆನ್ನಲ್ಲೇ ರಾಹುಲ್ ಗಾಂಧಿ ಪತ್ರ ಬರೆದಿದ್ದ 23 ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. 

ಈ 23 ನಾಯಕರಲ್ಲಿ ಐವರು ಮಾಜಿ ಸಿಎಂಗಳಾಗಿದ್ದರೆ, 13 ಕೇಂದ್ರದ ಮಾಜಿ ಸಚಿವರೂ ಆಗಿದ್ದವರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹುದ್ದೆಯಲ್ಲಿದ್ದವರೇ ಈಗ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರ ಬರೆದಿರುವು ನಿಷ್ದುಠ ರಾಹುಲ್ ಅಸಮಾಧಾನಕ್ಕೆ ಕಾರಣವಾಗಿದೆ.

ಹೀಗಾಘಿ ನೀವೆಲ್ಲಾ ಬಿಜೆಪಿ ಜೊತೆ ರಹಸ್ಯವಾಗಿ ಕೈಜೋಡಿಸಿದ್ದೀರಿ ಎಂದು ಈ ಸಭೆಯಲ್ಲಿ ಮಾಜಿ ಸಿಎಂಗಳಾದ ಪಕ್ಷ ನಿಷ್ಠರಾಗಿರುವ ಗುಲಾಂ ನಬಿ ಆಜಾದ್, ಭೂಪಿಂದರ್ ಹೂಡಾ, ಪೃಥ್ವಿರಾಜ್ ಚೌಹಾಣ್, ವೀರಪ್ಪ ಮೊಯ್ಲಿ, ರಾಜೇಂದರ್ ಕೌರ್ ವಿರುದ್ಧ ರಾಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.