ಬಿಜೆಪಿಯಲ್ಲಿ ಭುಗಿಲೆದ್ದ ಕಿಚ್ಚು: ಯತ್ನಾಳ್ ಉಚ್ಚಾಟನೆ ಫಿಕ್ಸ್?

ಬಿಜೆಪಿಯಲ್ಲಿ ಭುಗಿಲೆದ್ದ ಕಿಚ್ಚು: ಯತ್ನಾಳ್ ಉಚ್ಚಾಟನೆ ಫಿಕ್ಸ್?

Published : Dec 01, 2024, 03:55 PM IST

ಬಿಜೆಪಿಯಲ್ಲಿ ವಿಜಯೇಂದ್ರ ವಿರುದ್ಧ ಯತ್ನಾಳ್ ಬಣದ ನೇರ ಯುದ್ಧ, ಮಾಜಿ ಶಾಸಕರ ಬೀದಿಗಿಳಿದ ಪ್ರತಿಭಟನೆ, ಯತ್ನಾಳ್ ಉಚ್ಚಾಟನೆ ಸನ್ನಿಹಿತ ಎಂಬ ವದಂತಿಗಳ ನಡುವೆ ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತದ ಬೆಂಕಿ ಕಾಂಗ್ರೆಸ್‌ಗೆ ಬ್ರಹ್ಮಾಸ್ತ್ರವಾಗಿದೆ.

ಅದು ಸಹಸ್ರಾಯುಧ ಘರ್ಷಣೆಗೂ ಒಡೆಯದೇ ನಿಂತಿದ್ದ ಒಗ್ಗಟ್ಟಿನ ಮನೆ. ಆ ಮನೆಯ ಪರಿಸ್ಥಿತಿಯೀಗ ಮನೆಯೊಂದು ಮೂರು ಬಾಗಿಲು.. ಹಾದಿ ಬೀದಿ ಜಗಳ, ಹಾರಾಟ, ಚೀರಾಟ.. ಕಮಲಾಧಿಪತಿ ವಿರುದ್ಧ ರೆಬೆಲ್ ನಾಯಕರ ಕಿಚ್ಚು, ಬಂಡೆದ್ದು ದಂಡು ಕಟ್ಟಿದವರ ವಿರುದ್ಧ ಮಾಜಿ ಶಾಸಕರ ರೊಚ್ಚಿಗೆದ್ದಿದ್ದಾರೆ. ಇನ್ನೊಂದೆಡೆ ಕಮಲ ಕಲಿಗಳು ಶತ್ರುನಾಶ, ದುಷ್ಟ ಸಂಹಾರಕ್ಕೆ ಚಾಮುಂಡಿ ಮೊರೆ ಹೋಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯತ್ನಾಳ್ ಟೀಮ್ ನೇರ ಯುದ್ಧಕ್ಕೆ ನಿಂತಿದೆ. ರೆಬೆಲ್ ಯತ್ನಾಳ್ ವಿರುದ್ಧ ಬಿಜೆಪಿ ಮಾಜಿ ಶಾಸಕರ ಪಡೆ ಬೀದಿಗಿಳಿದಿದೆ. ಸದ್ಯದಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಫಿಕ್ಸ್ ಅಂತ ರೇಣುಕಾಚಾರ್ಯ ಹೇಳುತ್ತಿದ್ದಾರೆ. ಹಾಗಾದರೆ, ಈ ನಾನಾ ನೀನಾ ಗುದ್ದಾಟದಲ್ಲಿ ಗೆಲ್ಲೋರು ಯಾರೆಂಬುದು ಕುತೂಹಲ ಮೂಡಿಸಿದೆ. ಯತ್ನಾಳ್ ಉಚ್ಚಾಟನೆಯ ದಿನ ಹತ್ತಿರ ಬರ್ತಾ ಇದೆ ಅಂದಿರೋರ ಮಾತು ಅದೆಷ್ಟು ಸತ್ಯ ಕಾದು ನೋಡಬೇಕಿದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೆಹಲಿಗೆ ಹೋಗಿದ್ದು ಅದೇ ಕಾರಣಕ್ಕಾ ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ.

ಬೂದಿ ಮುಚ್ಚಿದ ಕೆಂಡದಂತಿದ್ದ ಬೆಂಕಿಯೀಗ ಕೆಂಡದ ಮಳೆಯಾಗಿ ಸುರೀತಾ ಇದೆ. ಬಿಜೆಪಿಯೊಳಗೆ ಸುರಿಯುತ್ತಿರೋ ಕೆಂಡದ ಮಳೆಯೇ ಕಾಂಗ್ರೆಸ್ ಪಾಲಿಗೆ ಬ್ರಹ್ಮಾಸ್ತ್ರ ಆಗಿದೆ. ಇದು ರಾಜ್ಯ ಬಿಜೆಪಿಯನ್ನು ಹೆಜ್ಜೆ ಹೆಜ್ಜೆಗೂ ಸುಡುತ್ತಿದೆ. ಅಷ್ಟಕ್ಕೂ ಕೇಸರಿ ಪಡೆಯ ಈ ಕೆಂಡದ ಮಳೆಯ ಬಗ್ಗೆ ಕೈ ನಾಯಕರು ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಲಿಷ್ಠ ಸರ್ಕಾರವನ್ನು ಎದುರಿಸಬೇಕು ಎಂದರೆ ಪ್ರತಿಪಕ್ಷವೂ ಅಷ್ಟೇ ಬಲಿಷ್ಠವಾಗಿರಬೇಕು, ಒಗ್ಗಟ್ಟಾಗಿರಬೇಕು. ಆದರೆ, ಬಿಜೆಪಿಯಲ್ಲಿ ಒಗ್ಗಟ್ಟು ಒಡೆದು ಹೋಗಿದೆ.. ಈ ಒಡೆದಿರೋ ಒಗ್ಗಟ್ಟೇ ಕಾಂಗ್ರೆಸ್ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ ಎಂದು ಹೇಳುತ್ತಿದ್ದಾರೆ. ಜೊತೆಗೆ, ಈ ಬೆಂಕಿಯನ್ನು ಆರಿಸುವ ಸಮಯ ಹತ್ತಿರ ಬಂದಿದೆ, ಕ್ಲೈಮ್ಯಾಕ್ಸ್ ಹತ್ತಿರದಲ್ಲೇ ಇದೆ ಅಂತಿದ್ದಾರೆ ಬಿಜೆಪಿ ನಾಯಕರು.

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?