ಐತಿಹಾಸಿಕ ವಿಜಯ ಸಂಕಲ್ಪ ಸಮಾರೋಪ ಸಮಾವೇಶಕ್ಕೆ ಪ್ರಧಾನಿ ಮೋದಿ, ಭರ್ಜರಿ ಸಿದ್ಧತೆ

Mar 22, 2023, 8:18 PM IST

ದಾವಣಗೆರೆ(ಮಾ.22): ಐತಿಹಾಸಿಕ ಬಿಜೆಪಿ ಸಮಾವೇಶಕ್ಕೆ ದಾವಣಗೆರೆ ಸಜ್ಜಾಗಿದೆ. ಮಾ. 25 ರಂದು ಸಮಾವೇಶ ನಡೆಯಲಿದೆ. ವಿಜಯ ಸಂಕಲ್ಪ ಸಮಾರೋಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ. ಈ ಐತಿಹಾಸಿಕ ವಿಜಯ ಸಂಕಲ್ಪ ಸಮಾರೋಪ ಸಮಾವೇಶದಲ್ಲಿ ಸುಮಾರು 10 ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಕಾರ್ಯಕರ್ತರ ಮಧ್ಯೆಯೇ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಬರುತ್ತಾರೆ. ಮೋದಿ ಎಂಟ್ರಿಗಾಗಿ ಬೃಹತ್‌ ತಯಾರಿ ನಡೆಯುತ್ತಿದೆ. ಬೆಣ್ಣೆನಗರಿ ದಾವಣಗೆರೆಯಾದ್ಯಂತ ಫ್ಲೆಕ್ಸ್‌, ಕಟೌಟ್‌ಗಳಿಂದ ರಾರಾಜಿಸುತ್ತಿದೆ. 

ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್‌ನಲ್ಲೇ ಸ್ಕೆಚ್! ಎಚ್‌ಡಿಕೆ ಹೊಸ ಬಾಂಬ್!