ಸಂತೋಷ್ ವಿರುದ್ಧ ವಿಡಿಯೋ ಇದ್ರೆ ಬಿಡುಗಡೆ ಮಾಡಲಿ ನೋಡೋಣ : ಡಿಕೆಶಿಗೆ ಈಶ್ವರಪ್ಪ ಸವಾಲ್

Nov 28, 2020, 3:05 PM IST

ಬೆಂಗಳೂರು (ನ. 28): ಸಿಎಂ ಆಪ್ತ ಸಂತೋಷ್ ಆತ್ಮಹತ್ಯೆಗೆ ಟ್ವಿಸ್ಟ್ ಕೊಟ್ಟು ಡಿಕೆಶಿ ನೀಡಿರುವ ಹೇಳಿಕೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾರ್‌ಗೆ ಕಾರಣವಾಗಿದೆ. 

'ಅವನ್ಯಾವನೋ ಸತ್ರೆ ನನಗೆ ಯಾಕ್ರೀ ಕೇಳ್ತೀರಾ'? ಸಂತೋಷ್ ಬಗ್ಗೆ ಈಶ್ವರಪ್ಪ ಸಿಡಿಮಿಡಿ

'ಡಿಕೆಶಿ ಹೇಳಿಕೆ ಮುಠ್ಠಾಳತನದ ಹೇಳಿಕೆ. ಇಂತಹ ಹೇಳಿಕೆ ನೀಡಲಿ ನಾಚಿಕೆಯಾಗ್ಬೇಕು. ವಿಡಿಯೋ ಲೀಕ್ ಅಂದ್ರೆ ಅವರ ಹತ್ರ ಇರಬೇಕಲ್ವ, ಅದನ್ನು ಬಿಡುಗಡೆ ಮಾಡಲಿ. ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುವುದನ್ನು ನಾನು ಖಂಡಿಸ್ತೀನಿ' ಎಂದು ಈಶ್ವರಪ್ಪ ಹೇಳಿದ್ದಾರೆ.