Jul 17, 2023, 11:21 PM IST
ವಿಪಕ್ಷಗಳ ಮಹಾ ಮೈತ್ರಿ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಬಿಜೆಪಿ ಮಣಿಸಲು ನಾಳೆ ಮಹತ್ವದ ಚರ್ಚೆ ನಡೆಯಲಿದೆ. ಈಗಾಗಲೇ ಘಟಾನುಘಟಿ ನಾಯಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ.ನಾಳೆ ದೆಹಲಿಯ ಅಶೋಕ ಹೊಟೆಲ್ನಲ್ಲಿ ಎನ್ಡಿಎ ಸಭೆ ಆಯೋಜಿಸಲಾಗಿದೆ. ಬೆಂಗಳೂರಿನ ವಿಪಕ್ಷಗಳ ಸಭೆ ಸೆಡ್ಡು ಹೊಡೆದಿರುವ ಬಿಜೆಪಿ ಬೃಹತ್ ಸಭೆ ಆಯೋಜಿಸಿದೆ.38 ಪಕ್ಷಗಳು ಎನ್ಡಿಎ ಸಭೆಗೆ ಬೆಂಬಲ ಸೂಚಿಸಿದೆ ಎಂದು ಬಿಜೆಪಿ ಹೇಳಿದೆ.ವಿಪಕ್ಷಗಳ ಮೈತ್ರಿ ಹಾಗೂ ಎನ್ಡಿಎ ಸಭೆಗೂ ಜೆಡಿಎಸ್ಗೆ ಯಾವುದೇ ಆಹ್ವಾನ ನೀಡಿಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆ, ರೈತರ ಸಮಾಧಿ ಮೇಲೆ ನಡೆಸಲಾಗುತ್ತಿದೆ ಎಂದು ಹೆಚ್ಡಿಕೆ ಹೇಳಿದ್ದಾರೆ.