ಜಾತಿ ರಾಜಕಾರಣದಲ್ಲಿ ಮಿಂದೆದ್ದ ಉಪಕಣ... ಕುರಿ ಕಾಯೋನು!.. 420..!

Oct 25, 2021, 11:31 PM IST

ಬೆಂಗಳೂರು(ಅ. 25)   ಉಪಕಣದಲ್ಲಿ (Karnataka By Poll) ವಾಕ್ ಸಮರ ಮುಂದುವರಿದಿದೆ. ಎಚ್‌ ಡಿ ದೇವೇಗೌಡರೇ (HD Devegowda) ಅಖಾಡದಲ್ಲಿ ಇದ್ದಾರೆ.  ಹಾನಗಲ್ (Hangal)ಮತ್ತು ಸಿಂಧಗಿ (Sindagi) ಗೆಲ್ಲಲು ಜಿದ್ದಿಗೆ ಬಿದ್ದಿರುವ ನಾಯಕರ ನಡುವಿನ ಮಾತಿನ ಸಮರ ಹೀಗಿದೆ. ಜಮೀರ್ ಅಹಮದ್ ಖಾನ್ (Zameer Ahmed Khan) ಮತ್ತು ಜೆಡಿಎಸ್ (JDS) ನಾಯಕರ ನಡುವಿನ ಮಾತಿನ ಫೈಟ್ ಮುಂದುವರಿದಿದೆ. ಭದ್ರಕೋಟೆಯಲ್ಲೇ ಜೆಡಿಎಸ್ ಗೆ ಗೆಲ್ಲಲು ಸಾಧ್ಯವಾಗಲ್ಲ ಎಂದು ಜಮೀರ್  ಟಾಂಗ್ ಕೊಟ್ಟಿದ್ದು ಅದಕ್ಕೆ ಕುಮಾರಸ್ವಾಮಿ  ಸಹ ಠಕ್ಕರ್ ಕೊಟ್ಟಿದ್ದಾರೆ.

ಅತ್ತ ಉಪಚುನಾವಣೆ.. ಇತ್ತ ವಿಧಾನಸೌಧಕ್ಕೆ ಬೀಗ ಎಂದ ಡಿಕೆಶಿ

ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮದಲ್ಲಿಯೂ ಜಾತಿ ಹುಡುಕಿದವರು ನೀವಲ್ಲವೇ ಸಿದ್ದರಾಮಯ್ಯನವರೇ ಎಂದು ಕರ್ನಾಟಕ ಬಿಜೆಪಿ ಕೇಳಿದರೆ  ಅದಕ್ಕೆ ಸಿದ್ದರಾಮಯ್ಯ ಸಹ ಉತ್ತರ ನೀಡಿದ್ದಾರೆ. ಕರ್ನಾಟದದಲ್ಲಿ ಒಂದರಿಂದ ಐದನೇ ತರಗತಿ ಶಾಲೆ ಆರಂಭವಾಗಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ