Feb 26, 2021, 3:43 PM IST
ಬೆಂಗಳೂರು (ಫೆ. 26): ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕುರಿತು ತಮಗೆ ನೊಟಿಸ್ ಕೊಡುವ ವಿಚಾರದ ಬಗ್ಗೆ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದಾರೆ.
ಪಕ್ಷ ನೋಟಿಸ್ನಲ್ಲಿ ಏನು ಕೇಳುತ್ತದೋ ನಾನದಕ್ಕೆ ಉತ್ತರ ಕೊಡಲು ಸಿದ್ಧ. ನಾನು ಇಲ್ಲಿ ಯಾರ ವಿರುದ್ಧವೂ ಮಾತನಾಡಲ್ಲ. ಯಾರು ಸಮಜಾಯಿಷಿ ಕೇಳುತ್ತಾರೋ ಅವರಿಗೆ ಉತ್ತರ ಕೊಡುತ್ತೇನೆ. ಮೈಸೂರು ನಾಗರೀಕರ ಹಿತದೃಷ್ಟಿಯಿಂದ ನಾನು ಕೊನೆ ಕ್ಷಣದಲ್ಲಿ ನಿರ್ಧಾರ ತೆಗೆದುಕೊಂಡೆ' ಎಂದಿದ್ದಾರೆ.