ಮೋದಿಯ ಸುಳ್ಳುಗಳ ಸರಮಾಲೆಗೆ 9 ವರ್ಷಗಳಾಗಿವೆ: ಸಂಸದ ಡಿ.ಕೆ ಸುರೇಶ್

Feb 1, 2023, 6:13 PM IST

ಇದು ಯಾವ ಕಾಲದ ಬಜೆಟ್‌ ಎಂದು ಅರ್ಥವಾಗಿಲ್ಲ. ಅಮೃತಕಾಲದ್ದೋ ಅಥವಾ ಅದಾನಿ ಕಾಲದ್ದೋ ಎಂದು ತಿಳಿಯುತ್ತಿಲ್ಲ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ. ಮೋದಿಯ ಸುಳ್ಳುಗಳ ಸರಮಾಲೆಗೆ 9 ವರ್ಷಗಳಾಗಿವೆ. ಆತ್ಮನಿರ್ಭರ ಯೋಜನೆಯನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾಗಿದ್ದಾರೆ. ಕರ್ಮಯೋಗಿ ಯೋಜನೆಯಲ್ಲಿ ಉದ್ಯೋಗವನ್ನೇ ಕೊಡಲಿಲ್ಲ. ಬೆಲೆ ಏರಿಕೆಯನ್ನು ತಡೆಯುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.