ಭ್ರಷ್ಟತೆ, ಅತಂತ್ರತೆಯಿಂದ ಮುಕ್ತಿ, ಇದು ಜನಾದೇಶದ ಯುಕ್ತಿ: ಸಂಸದ ರಾಜೀವ್

Dec 9, 2019, 4:20 PM IST

ಬೆಂಗಳೂರು (ಡಿ.09): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ  ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸುವ ಮೂಲಕ ವಿಧಾನಸಭೆಯಲ್ಲಿ ಬಹುಮತ ಗಳಿಸಿದೆ.

ಈ ಬಗ್ಗೆ ಸಂಸದ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದು, ಸ್ವಚ್ಛ, ಪ್ರಾಮಾಣಿಕ ಸರ್ಕಾರಕ್ಕೆ ಸಿಕ್ಕಿರುವ ಜನಾದೇಶ ಇದಾಗಿದೆ ಎಂತು ತಿಳಿಸಿದರು. 

ಡಿ.05ರಂದು 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು. ಬಿಜೆಪಿ 12 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್  2 ಸ್ಥಾನಗಳನ್ನು ಪಡೆದಿದೆ.