Video- ಲೋಕಾಯುಕ್ತ ಪೊಲೀಸರು ಅಯೋಗ್ಯರು, ಅನರ್ಹರು, ನಾಲಾಯಕ್ಕು! ರವಿಕೃಷ್ಣ ರೆಡ್ಡಿ ಆಕ್ರೋಶ

Video- ಲೋಕಾಯುಕ್ತ ಪೊಲೀಸರು ಅಯೋಗ್ಯರು, ಅನರ್ಹರು, ನಾಲಾಯಕ್ಕು! ರವಿಕೃಷ್ಣ ರೆಡ್ಡಿ ಆಕ್ರೋಶ

Published : Mar 07, 2023, 07:22 PM IST

ಲೋಕಾಯುಕ್ತ ಪೊಲೀಸರು ಅಯೋಗ್ಯರು, ಅನರ್ಹರು ಹಾಗೂ ನಾಲಾಯಕ್ಕು ಎಂದು ಕೆಆರ್‌ಎಸ್‌ ಪಕ್ಷದ ಸಂಸ್ಥಾಪಕ ಆಧ್ಯಕ್ಷ ರವಿಕೃಷ್ಣರೆಡ್ಡಿ ಕಿಡಿಕಾರಿದ್ದಾರೆ.

ಬೆಂಗಳೂರು (ಮಾ.07): ಸುಮಾರು 6 ಕೋಟಿ ರೂ. ಅಕ್ರಮ ಹಣದ ಆರೋಪಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರು ಜಾಮೀನು ಪಡೆದುಕೊಂಡು ಅದ್ಧೂರಿ ಮೆರವಣಿಗೆ ಮಾಡಿಸಿಕೊಂಡಿದ್ದಾನೆ. ಈ ಕುರಿತು ಕೆಆರ್‌ಎಸ್‌ ಪಕ್ಷದ ಸಂಸ್ಥಾಪಕ ಆಧ್ಯಕ್ಷ ರವಿಕೃಷ್ಣರೆಡ್ಡಿ ಮಾತನಾಡಿ, ಲೋಕಾಯುಕ್ತ ಪೊಲೀಸರು ಅಯೋಗ್ಯರು, ಅನರ್ಹರು ಹಾಗೂ ನಾಲಾಯಕ್ಕು ಎಂದು ಕಿಡಿಕಾರಿದ್ದಾರೆ. ಲೋಕಾಯುಕ್ತಕ್ಕೆ ದೂರು ಕೊಡುವವರು ವೀಡಿಯೋ ಮತ್ತು ಆಡಿಯೋ ಸಾಕ್ಷಾಧಾರಗಳ ಮೂಲಕ ದೂರು ನೀಡಲು ಹೋಗುತ್ತಾರೆ. ಆಗ ಸಂಪೂರ್ಣವಾಗಿ ಎಫ್‌ಐಆರ್‌ ದಾಖಲಿಸಿಕೊಳ್ಳುತ್ತಾರೆ. ಇಲ್ಲವೆಂದರೆ ಯಾವುದಾದರೂ ನ್ಯೂಸ್‌ ಚಾನೆಲ್‌ಗೆ ಅದನ್ನು ಕೊಟ್ಟಾಗ ಲೋಕಾಯುಕ್ತದ ಮೇಲೆ ದೊಡ್ಡ ಆರೋಪ ಕೇಳಿಬರುತ್ತದೆ.

ಲೋಕಾಯುಕ್ತರು ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಪುತ್ರನ ಕಚೇರಿ ಮೇಲೆ ದಾಳಿ, ಅವರ ಮನೆಯ ಮೇಲೆ ದಾಳಿ ಹಾಗೂ ಇತರೆಡೆ ದಾಳಿ ಸುಮಾರು 6 ಕೋಟಿ ರೂ. ಅಕ್ರಮ ಹಣ ಇಟ್ಟುಕೊಂಡಿರುವುದು ಕಂಡುಬಂದಿತ್ತು. ಆದರೆ, ನ್ಯಾಯಾಲಯದಲ್ಲಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಪರವಾಗಿ ಹಿರಿಯ ವಕೀಲ ವಾದವನ್ನು ಮಾಡಿದ್ದಾರೆ. ಮತ್ತೊಂದೆಡೆ ಲೋಕಾಯುಕ್ತ ಇಲಾಖೆ ಪರವಾಗಿ ಕಿರಿಯ ಸರ್ಕಾರಿ ವಕೀಲ ವಾದ ಮಾಡಿದ್ದಾರೆ ಎಂದು ಕೇಳಿಬಂದಿದೆ. ಪರಮ ಪವಿತ್ರವಾದ ರಾಜಕಾರಣಕ್ಕೆ ಹಲ್ಕಾಗಳು ಬಂದಿದ್ದಾರೆ. ಇದನ್ನು ಕ್ಲಿಯರ್‌ ಮಾಡುವುದು ಅಗತ್ಯವಾಗಿದೆ.

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more