ವಿಜಯೇಂದ್ರ ಭೇಟಿ ಬಳಿಕ ಮುಗಿಯದ ಕುತೂಹಲ, ನಾಳೆ ಘೋಷಣೆಯಾಗಲಿದೆ ಸುಮಲತಾ ನಿರ್ಧಾರ!

Mar 29, 2024, 11:01 PM IST

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿರುವ ಪಕ್ಷೇತ್ರರ ಸಂಸದೆ ಸುಮಲತಾಗೆ ಈ ಬಾರಿ ಮಂಡ್ಯ ಕ್ಷೇತ್ರ ಕೈತಪ್ಪಿದೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಹಂಚಿಕೆ ಮಾಡಿದ ಬಳಿಕ ಸುಮಲತಾ ನಡೆ ಕುತೂಹಲ ಕೆರಳಿಸಿದೆ. ಅಂತರ ಕಾಯ್ದುಕೊಂಡಿರುವ ಸುಮಲತಾರನ್ನು ಇಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಹತ್ವದ ಮಾತುಕತೆ ನಡೆಸಿದ್ದಾರೆ. ಸುದೀರ್ಘ ಚರ್ಚೆ ಬಳಿಕ ಮಂಡ್ಯ ಸುಮಲತಾ ನಿರ್ಧಾರ ಕುತೂಹಲಕ್ಕೆ ತೆರೆ ಬಿದ್ದಿಲ್ಲ. ನಾಳೆ ಸುಮಲತಾ ಬೆಂಬಲಿಗರ ಸಭೆ ನಡೆಸಿ ನಿರ್ಧಾರ ಘೋಷಿಸಲಿದ್ದಾರೆ.