ಮಂಡ್ಯ ರಣರಂಗದಲ್ಲಿ ದೋಸ್ತಿ ದಂಗಲ್, ನನ್ನ ಕೋಟೆ ನಾನ್ಯಾಕೇ ಬೇರೆಯವ್ರಿಗೆ ಬಿಟ್ಟು ಕೊಡ್ಲಿ ಅಂತಿದ್ದಾರೆ ಸುಮಲತಾ!

Feb 7, 2024, 3:27 PM IST

ಸಕ್ಕರೆ ನಾಡಿನ ಲೋಕಸಭಾ ಸೀಟಿಗಾಗಿ ಬಿಜೆಪಿ-ಜೆಡಿಎಸ್ ಮಧ್ಯೆ  ಕಮಲದಳ ದೋಸ್ತಿ ದಂಗಲ್ ಶುರುವಾಗಿದೆ. ಮಂಡ್ಯ ಸಿಂಹಾಸನಕ್ಕೆ ಹಾಸನದ ಕೇಸರಿ ಕಲಿ ಪ್ರಬಲ ಪಟ್ಟು ಹಾಕಿದ್ದಾರೆ. ಮಂಡ್ಯ ನಮ್ಮದೇ ಅಂತಿದ್ದಾರೆ ದಳಪತಿಗಳು. ಮಂಡ್ಯವನ್ನು ಬಿಟ್ಟು ಕೊಡೋ ಪ್ರಶ್ನೆಯೇ ಇಲ್ಲ ಅಂತಿದ್ದಾರೆ ಕೇಸರಿ ಪಾಳಯದವರು. ಮತ್ತೊಂದ್ಕಡೆ ನನ್ನ ಕೋಟೆಯನ್ನು ನಾನ್ಯಾಕೇ ಬೇರೆಯವ್ರಿಗೆ ಬಿಟ್ಟು ಕೊಡ್ಲಿ ಅಂತ ಪಟ್ಟು ಹಾಕಿ ಕೂತಿದ್ದಾರೆ ಹಾಲಿ ಸಂಸದೆ ಸುಮಲತಾ ಅಂಬರೀಶ್. ಹಾಗಾದ್ರೆ ಮಂಡ್ಯದ ಮಿಸ್ಟ್ರಿಯನ್ನು ಭೇದಿಸೋರು ಯಾರು? ಇಲ್ಲಿದೆ ಸಂಪೂರ್ಣ ವಿವರ.