ಹಿರಿಯರನ್ನು ಧರ್ಮ ಸಂಕಟಕ್ಕೆ ತಳ್ಳಿತಾ ಶೆಟ್ಟರ್ ನಿರ್ಧಾರ : ಈಶ್ವರಪ್ಪ ಕಣ್ಣು ಎಲ್ಲಿ..?

Jul 29, 2021, 11:28 AM IST

ಬೆಂಗಳೂರು (ಜು.29): ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ ನೂತನ ಸಂಪುಟ ರಚನೆ ಬಗ್ಗೆಯೂ ಚರ್ಚೆ ಜೋರಾಗಿದೆ. 

ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆಯೇ ಒಂದು ದೃಢ ನಿರ್ಧಾರ ಕೈಗೊಂಡ ಶೆಟ್ಟರ್

ಈ ಸಂದರ್ಭದಲ್ಲಿ ಶೆಟ್ಟರ್ ತಾವು ಬೊಮ್ಮಾಯಿ ಸಂಪುಟ ಸೇರಲ್ಲ ಎಂದಿರುವುದು ಹಿರಿಯ ನಾಯಕರನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದೆ. ಅಲ್ಲದೇ ಯುವಕರಿಗೆ ಮಣೆ ಎಂಬ ಮಾತುಗಳು ರಾಜ್ಯದಲ್ಲಿ ದಟ್ಟವಾಗಿದೆ.