ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ವೇಟಿಂಗ್ ಲಿಸ್ಟ್! ಖಾಲಿಯಿಲ್ಲದ ಕುರ್ಚಿಯ ಮೇಲೆ 'ಪಂಚ'ಪಾಂಡವರ ಕಣ್ಣು!

Sep 3, 2024, 11:45 AM IST

ಮುಡಾ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಗ್ನಿಪರೀಕ್ಷೆ ಅನ್ನೋದರಲ್ಲಿ ಅನುಮಾನವೇ ಬೇಡ. ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ದೊಡ್ಡ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ. ಒಂದು ವೇಳೆ ಮುಡಾ ಚಕ್ರವ್ಯೂಹ ಸಿದ್ದು ಸಿಂಹಾಸವನ್ನೇ ಉರುಳಿಸಿ ಬಿಟ್ರೆ, ಸಿದ್ದರಾಮಯ್ಯ ರಾಜೀನಾಮೆ ನೀಡೋ ಪ್ರಸಂಗ ಎದುರಾದ್ರೆ, ಮುಖ್ಯಮಂತ್ರಿ ಯಾರಾಗ್ತಾರೆ? ವೇಟಿಂಗ್ ಲಿಸ್ಟ್'ನಲ್ಲಿರೋ ಐದು ಮಂದಿಯ ಪೈಕಿಮೊದಲ ಹೆಸರು ಯಾರದ್ದು? ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿರೋ ಡಿಸಿಎಂ ಡಿಕೆ ಶಿವಕುಮಾರ್ ಆ ಲಿಸ್ಟ್'ನಲ್ಲಿ ಎಷ್ಟನೆಯವರು? ಇಲ್ಲಿದೆ ನೋಡಿ ಆ ಇಂಟ್ರೆಸ್ಟಿಂಗ್ ಸ್ಟೋರಿ.