ಚಾಮುಂಡಿ ಚಾಲೆಂಜ್‌ಗೆ ಬಿಗ್ ಟ್ವಿಸ್ಟ್ ಕೊಟ್ಟ ಅನರ್ಹ ಶಾಸಕ ವಿಶ್ವನಾಥ್!

Oct 17, 2019, 11:46 AM IST

ಮೈಸೂರು[ಅ.17]: ಚಾಮುಂಡಿ ಚಾಲೆಂಜ್‌ಗೆ ಅನರ್ಹ ಶಾಸಕ ವಿಶ್ವನಾಥ್ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಸಾರಾ ಮಹೇಶ್‌ಗೆ ಸವಾಲೆಸೆದಿರುವ ವಿಶ್ವನಾಥ್ ಆಣೆ ಪ್ರಮಾಣ ಏನಿಲ್ಲ. ಖರೀದಿ ಮಾಡಿದವರನ್ನು ಕರೆದುಕೊಂಡು ಬರಲಿ ಎಂದಿದ್ದಾರೆ.

'ಆಣೆ ಪ್ರಮಾಣ ಯಾಕೆ ಬೇಕು? ನಾನು ಪ್ರಮಾಣ ಮಾಡಲ್ಲ, ಮಾಡಲ್ಲ. ಚಾಮುಂಡೇಶ್ವರಿ ಸನ್ನಿಧಿಗೆ ಹೋಗ್ತಿನಿ, ಆದ್ರೆ ಪ್ರಮಾಣ ಮಾಡೋದಿಲ್ಲ’ ಎಂದಿದ್ದಾರೆ.

ಎಚ್. ವಿಶ್ವನಾಥ್ ಈ ಹೇಳಿಕೆ ಕೇಳಿದ್ರೆ ಆಣೆ ಪ್ರಮಾಣದಿಂದ ಅವರು ಜಾರಿಕೊಂಡರಾ ಎಂಬ ಅನುಮಾನ ದಟ್ಟವಾಗಿದೆ.

ಚಾಮುಂಡಿ ಚಾಲೆಂಜ್: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ