ಬೊಮ್ಮಾಯಿ ಸಂಪುಟಕ್ಕೆ ಹೊಸಬರ ಆಯ್ಕೆ ಖಚಿತ : ಶೀಘ್ರ ಪಟ್ಟಿ ತಯಾರಿ

Jul 28, 2021, 11:13 AM IST

ಬೆಂಗಳೂರು (ಜು.28): ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 

ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೊಮ್ಮಾಯಿ!

ಇಂದು ಸಿಎಂ ಬೊಮ್ಮಾಯಿ ಸಿಎಸ್ ರವಿಕುಮಾರ್ ಅವರ ಜೊತೆ ಸಭೆ ನಡೆಸಲಿದ್ದಾರೆ. ಅಲ್ಲದೇ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಬಗ್ಗೆ ಚರ್ಚಿಸಲಿದ್ದಾರೆ. ನೆರೆ ಪೀಡಿತ ಪ್ರದೇಶಗಳ ಭೇಟಿ ಬಳಿಕ ಸಚಿವ ಸಂಪುಟ ರಚನೆ ಮಾಡಲಿದ್ದಾರೆ. ಸಂಪುಟಕ್ಕೆ ಹೊಸಬರ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಸಚಿವರ ಪಟ್ಟಿಯನ್ನು ಸಿದ್ದಮಾಡಿ ಈ ಸಂಬಂದ ಹೈ ಕಮಾಂಡಿಗೆ ರವಾನೆ ಮಾಡಲಿದ್ದಾರೆ.