ಕುರುಬರಿಗೆ ಅವಮಾನ ಬೆನ್ನಲ್ಲೇ ಸಚಿವ ಮಾಧುಸ್ವಾಮಿ ಮತ್ತೊಂದು ಅತಿರೇಕ

Nov 21, 2019, 1:26 PM IST

ಬೆಂಗಳೂರು (ನ.21): ಕುರುಬ ಸಮುದಾಯಕ್ಕೆ ಅವಮಾನ ಮಾಡಿರುವ ವಿವಾದ ಇನ್ನೂ ಶಮನವಾಗಿಲ್ಲ. ಅದರ ಬೆನ್ನಲ್ಲೇ ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತೊಂದು ಎಡವಟ್ಟು ಮಾಡಿಕೊಂಡಿರುವ ವಿಚಾರ ಹೊರಬಂದಿದೆ.

ಚಿಕ್ಕನಾಯಕನ ಹಳ್ಳಿ ಹುಳಿಯಾರು ಪಟ್ಟಣದ ವೃತ್ತಕ್ಕೆ ಹೆಸರಿಡುವ ವಿಚಾರದಲ್ಲಿ ಕುರುಬ ಸ್ವಾಮೀಜಿಗೆ ಅವಮಾನ ಮಾಡಿರುವ ವಿಚಾರ ಈಗ ತೀವ್ರ ಸ್ವರೂಪಪಡೆದುಕೊಂಡಿದೆ. ಈ ಬಗ್ಗೆ ಮಾಧುಸ್ವಾಮಿ ವಿಷಾದ ವ್ಯಕ್ತಪಡಿಸಿದ್ದರೂ, ಪ್ರತಿಭಟನೆಗಳು ಮುಂದುವರಿದಿವೆ.