Karnataka Election: ಹಿರೇಕೆರೂರು ಕ್ಷೇತ್ರದ ಗಲ್ಲಿ ಗಲ್ಲಿಯಲ್ಲಿ ಬಿ ಸಿ ಪಾಟೀಲ್‌ ಅಬ್ಬರದ ಪ್ರಚಾರ

Apr 23, 2023, 6:20 PM IST

ಹಾವೇರಿ (ಏ.23): ಹಿರೇಕೇರೂರು ಬಿಜೆಪಿ ಅಭ್ಯರ್ಥಿಯಾಗಿರುವ ಬಿ.ಸಿ. ಪಾಟೀಲ್ ಅವರು ಹಳ್ಳಿ ಹಳ್ಳಿಗಳಿಗೆ ತೆರಳಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ನೂರಾರು ಬಿಜೆಪಿ ಕಾರ್ಯಕರ್ತರ ಜೊತೆ ತೆರಳಿ ಭರ್ಜರಿ ಪ್ರಚಾರ ನಡೆಸಿದ್ದು, ಹಿರೇಕೆರೂರ ಮತಕ್ಷೇತ್ರದ ಡಮ್ಮಳ್ಳಿ ಗ್ರಾಮದಲ್ಲಿ ಪ್ರಚಾರ ಮಾಡಿದ್ದಾರೆ.  ಮಹಿಳಾ ಮತದಾರರ ಬಳಿ ಬಿ.ಸಿ ಪಾಟೀಲ್ ಮತ ಯಾಚನೆ ಮಾಡಿದ್ದು, ತಾಯಂದಿರು , ಸಹೋದರರಿಯರ ಆಶೀರ್ವಾದ ಬಹಳ ಮುಖ್ಯ. ನಿಮ್ಮ ಬೆಂಬಲ ನೋಡಿ ಸಂತೋಷವಾಗಿದೆ ಎಂದರು. ಡಮ್ಮಳ್ಳಿ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಪ್ರಚಾರ ನಡೆಸಿದರು.