ಕೆ.ಆರ್. ಪೇಟೆ ಅಖಾಡಕ್ಕೆ ಜೋಡೆತ್ತು ಎಂಟ್ರಿ? ಯಾರ ಪರ ತಾರಾಬಲ?

Nov 28, 2019, 1:46 PM IST

ಮಂಡ್ಯ (ನ.28): ಮಂಡ್ಯದಲ್ಲಿ ಚುನಾವಣಾ ಪ್ರಚಾರ ಅಂದ್ರೆ ನೆನಪಾಗೋದು ಜೋಡೆತ್ತುಗಳು. ಕೆ.ಆರ್‌.ಪೇಟೆ ಉಪಚುನಾವಣಾ ಅಖಾಡದಲ್ಲಿ ರಾಜಕಾರಣಿಗಳು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಸುಮಲತಾ ಬೆಂಬಲವನ್ನು ನಿರೀಕ್ಷಿಸುತ್ತಿದ್ದಾರೆ. ಆವರಿನ್ನೂ ಮೌನ ಮುರಿದಿಲ್ಲ. ಆದ್ರೆ ದರ್ಶನ್ ಮತ್ತು ಯಶ್ ಅಖಾಡಕ್ಕಿಳಿಯಲಿದ್ದಾರಾ? ಹಾಗಾದ್ರೆ ಯಾರ ಪರ?

ಡಿ.05ಕ್ಕೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದು, ಡಿ.09ಕ್ಕೆ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.