ಕರ್ನಾಟಕ ಉಪಚುನಾವಣೆ: ಹಳೇ ಹುರಿಯಾಳುಗಳ ಹೋರಾಟ, ಮತ್ತೆ ಸಿಗ್ತಾರಾ ಈ ನಾಯಕರು!

ಕರ್ನಾಟಕ ಉಪಚುನಾವಣೆ: ಹಳೇ ಹುರಿಯಾಳುಗಳ ಹೋರಾಟ, ಮತ್ತೆ ಸಿಗ್ತಾರಾ ಈ ನಾಯಕರು!

Published : Nov 12, 2024, 11:52 AM IST

ಕರ್ನಾಟಕದ ಉಪಚುನಾವಣೆಯಲ್ಲಿ ದೇವೇಗೌಡ, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ಅಬ್ಬರದ ಪ್ರಚಾರ ನಡೆದಿದೆ. ಇಳಿ ವಯಸ್ಸಿನಲ್ಲಿಯೂ ಚುನಾವಣಾ ರಣರಂಗದಲ್ಲಿ ಮತಬೇಟೆಯಾಡಿದ ಮಾಸ್ ಲೀಡರ್‌ಗಳು ಮತ್ತೆ ಸಿಗ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಬೆಂಗಳೂರು (ನ.12): ಕರ್ನಾಟಕದ ಉಪಚುನಾವಣೆಯ ಕ್ಷೇತ್ರಗಳಾದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿಯಲ್ಲಿ ಬಹಿರಂಗ ಪ್ರಚಾರಕ್ಕೆ ಬ್ರೇಕ್ ಬಿದ್ದಾಯ್ತು. ಇನ್ನೇನಿದ್ರು ಹೋರಾಟದ ಪ್ರತಿಫಲದ ನಿರೀಕ್ಷೆ. ಇಲ್ಲಿ ಹೋರಾಟ ಅಂದುಕೂಡ್ಲೆ ಆ ಮೂವರು ಹುರಿಯಾಳುಗಳ ಅಬ್ಬರದ.. ಆರ್ಭಟದ ಪ್ರಚಾರ ಕಣ್ಮುಂದೆ ಬರುತ್ತೆ. 92ನೇ ವಯಸ್ಸಿನಲ್ಲಿಯೂ ಗುಡುಗಿರುವ ಗೌಡರು, ಗುಟುರು ಹಾಕತ್ತಾ ಅಶ್ವಮೇಧಯಾಗ ನಡೆಸಿದ ಟಗರು. ಚುನಾವಣಾ ರಣರಂಗದಲ್ಲಿ ಮತಬೇಟೆಯಾಡಿದ ರಾಜಾಹುಲಿ. ದಣಿವರಿಯದ ನಾಯಕರ ಪವರ್ ಪ್ರದರ್ಶನಕ್ಕೆ ಸಾಕ್ಷಿಯಾಗೋರೋದು ಮಿನಿ ದಂಗಲ್. ಹಾಗಿದ್ರೆ, ಉಪಚುನಾವಣಾ ಸಂಗ್ರಾಮದಲ್ಲಿ ಹಳೇ ಹುರಿಯಾಳುಗಳ ಹೋರಾಟ ಹೇಗಿತ್ತು.?

ದೇವೇಗೌಡ್ರು, ಸಿದ್ದರಾಮಯ್ಯ ಅವರಂತೆ ಉಪಚುನಾವಣೆಯಲ್ಲಿ ರಾಜಾಹುಲಿಯ ಘರ್ಜನೆಯೂ ಜೋರಾಗಿತ್ತು. ದೇವೇಗೌಡ್ರು, ಸಿದ್ದರಾಮಯ್ಯ ತರಾನೇ ಇತ್ತ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೂರು ಕ್ಷೇತ್ರಗಳನ್ನು ಸುತ್ತಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಅದೇ ಹುಮ್ಮಸ್ಸಿನಲ್ಲಿ.. ಅದೇ ಅಬ್ಬರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ದೇವೇಗೌಡ್ರು, ಯಡಿಯೂರಪ್ಪ, ಸಿದ್ದರಾಮಯ್ಯ. ಇವರೆಲ್ಲಾ ಕರ್ನಾಟಕದ ಮಾಸ್ ಲೀಡರ್ಗಳು..ಇಂಥಹ ಮಾಸ್ ಲೀಡರ್‌ಗಳು ನಮ್ಮ ರಾಜ್ಯಕ್ಕೆ ಮತ್ತೆ ಸಿಗ್ತಾರಾ ಅನ್ನೋ ಪ್ರಶ್ನೆ ಉದ್ಭವಿಸಿದೆ.

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more