ಅತ್ತ ಹಸ್ತ ಪಾಂಚಜನ್ಯ..ಇತ್ತ ಕೇಸರಿ ರಣಕಹಳೆ, ಕಮಲ ಪಾಳಯದ ಹಣೆಬರಹ ಬದಲಿಸುತ್ತಾ 50:50 ಸೀಕ್ರೆಟ್?

Jul 17, 2022, 3:36 PM IST

ಬೆಂಗಳೂರು, (ಜುಲೈ.17): ಅತ್ತ ಮೊಳಗಿದೆ ಹಸ್ತ ಪಾಂಚಜನ್ಯ.. ಇತ್ತ ಮಾರ್ದನಿಸುತ್ತಿದೆ ಕಮಲ ರಣಕಹಳೆ.. ಕೇಸರಿ ಪಾಳಯದ ಹಣೆಬರಹ ಬದಲಿಸುತ್ತಾ 50:50 ಸೀಕ್ರೆಟ್..? ಫಿಕ್ಸ್ ಆಯ್ತು ಟಾರ್ಗೆಟ್-19.. ಒಬ್ಬೊಬ್ಬರಿಗೂ ಡಬ್ಬಲ್ ಟಾಸ್ಕ್. ಬಿಜೆಪಿ ಸೂತ್ರಗಳನ್ನ ಹೆಣೆದು ಅಧಿಕಾರ  ದಕ್ಕಿಸಿಕೊಳ್ಳೋದನ್ನ, ಈಗೀಗ ತನ್ನ ಸ್ವಭಾವವನ್ನಾಗಿ ಮಾಡಿಕೊಂಡಿದೆ.. ಅಂಥದ್ದೇ ಸ್ಟ್ರಾಟಜಿ ಈಗ ಕರ್ನಾಟಕದಲ್ಲೂ ಅಪ್ಲೈ ಮಾಡೋಕೆ ನೋಡ್ತಿದ್ದಾರೆ,. 

ಬೆಂಗಳೂರಿನ ಇಬ್ಬರು ಸಚಿವರಿಗೆ ಗದರಿದ ಬಿಎಲ್ ಸಂತೋಷ್; ಫುಲ್ ಕ್ಲಾಸ್

ಬಿಜೆಪಿ ಟಾರ್ಗೆಟ್ ಈ ಸಲ 150..  ಈ ನಂಬರ್ ಮುಟ್ಟೋದು ಅಂದ್ರೆ ಸಾಮಾನ್ಯ ಸಂಗತಿ ಅಲ್ಲ. ಅದು ಸುಲಭವಂತೂ ಅಲ್ವೇ ಅಲ್ಲ.. ಹಾಗಾಗಿನೇ, ದೊಡ್ಡದೊಂದು ರಣತಂತ್ರ ಹೆಣೆದು ಗೆಲ್ಲೋದಕ್ಕೆ ಹೊರಟಿದೆ, ಕೇಸರಿ ಪಡೆ..  ರಣಕಣ ಗೆಲ್ಲಲು ಕೇಸರಿ ಪಡೆಯ ಸ್ಟ್ರಾಟಜಿ ಏನು..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ಕೇಸರಿ ಕಹಳೆ.