Janardhana Reddy: ಜನಾರ್ದನ ರೆಡ್ಡಿಯಿಂದ ದೂರ-ದೂರ: ಗಣಿಧಣಿಯಿಂದ ಅಂತರ ಕಾಯ್ದುಕೊಂಡ ಸಹೋದರ & ಸ್ನೇಹಿತ

Dec 14, 2022, 1:04 PM IST

ಗಂಗಾವತಿಯಲ್ಲಿ ಮಾಜಿ ಜನಾರ್ದನರೆಡ್ಡಿ ತಮ್ಮ ಪತ್ನಿಯ ಮೂಲಕ ಹೊಸ ಮನೆ ಗೃಹಪ್ರವೇಶ ಕಾರ್ಯಕ್ರಮ ಮಾಡಿಸಿದ್ದಾರೆ. ಗಂಗಾವತಿಯಿಂದಲೇ ಜನಾರ್ದನರೆಡ್ಡಿ ಸ್ಪರ್ಧೆ ಖಚಿತವಾಗಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೆಸರಿನಲ್ಲಿ ಪಕ್ಷ ಸ್ಥಾಪನೆಗೆ ನಿರ್ಧರಿಸಿದ್ದಾರೆ. ರೆಡ್ಡಿ ಹೊಸ ಪಕ್ಷದ ನೋಂದಣಿ ಬಾಕಿಯಿದ್ದು, ಪಕ್ಷದ ನೋಂದಣಿ ಬಳಿಕ ಚಿಹ್ನೆಯ ಲೋಕಾರ್ಪಣೆಗೆ ಬ್ರಹತ್‌ ಮೆರವಣೆಗೆ ಮೂಲಕ ಗಂಗಾವತಿಗೆ ರೆಡ್ಡಿ ಪ್ರವೇಶ ಮಾಡಲಿದ್ದಾರೆ. ಈ ನಡುವೆ ರೆಡ್ಡಿ ಸಹೋದರ ಸೋಮಶೇಖರ್‌ ರೆಡ್ಡಿ, ಹೊಸ ಪಕ್ಷ ಕಟ್ಟಲ್ಲ ಕಟ್ಟಿದ್ರೆ ನಾನು ಹೋಗಲ್ಲ ಎಂದು ಹೇಳಿಕೆ ನೀಡಿದ್ದಾರೆ. ಶ್ರೀರಾಮಲು ಹಾಗೂ ಸೋಮಶೇಖರ್‌ ರೆಡ್ಡಿ ಇಬ್ಬರೂ ಸಹ ಜನಾರ್ದನರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇಬ್ಬರು ಕೈ ಕೊಟ್ಟರೆ ರೆಡ್ಡಿಗೆ ಹಿನ್ನೆಡೆ ಉಂಟಾಗುವ ಸಾಧ್ಯತೆ ಇದೆ.